Friday, March 21, 2025
HomeUncategorized10 ಕೋಟಿ ವೆಚ್ಚದಲ್ಲಿ ಚತುಷ್ಪಥ ಕಾಮಗಾರಿಗೆ ಚಾಲನೆ

10 ಕೋಟಿ ವೆಚ್ಚದಲ್ಲಿ ಚತುಷ್ಪಥ ಕಾಮಗಾರಿಗೆ ಚಾಲನೆ


ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ಪ್ರಥಮ ಆದ್ಯತೆ : ಯಶ್ ಪಾಲ್ ಸುವರ್ಣ

ಉಡುಪಿ ಗ್ರಾಮಾಂತರ ಭಾಗದ ಬ್ರಹ್ಮಾವರ ಹೆಬ್ರಿ ರಾಜ್ಯ ಹೆದ್ದಾರಿಯ ಕರ್ಜೆ ಗ್ರಾಮದ ಅಪ್ರಿಕಟ್ಟೆ ಸೇತುವೆಯಿಂದ ಹೊಸೂರು ಶಾಲೆ ವರೆಗಿನ ಚತುಷ್ಪಥ ರಸ್ತೆ ಕಾಮಗಾರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯಶ್ ಪಾಲ್ ಸುವರ್ಣ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯ ಎಸ್. ಎಚ್. ಡಿ. ಪಿ. ಯೋಜನೆಯಡಿ ₹ 10 ಕೋಟಿ ಅನುದಾನದ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಉಡುಪಿ ಕ್ಷೇತ್ರದ ಗಡಿಭಾಗ ಕಳ್ತೂರು ವರೆಗೂ ಚತುಷ್ಪಥ ರಸ್ತೆ ವಿಸ್ತರಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ಶ್ರೀ ರಾಜೀವ್ ಕುಲಾಲ್, ಪ್ರಮುಖರಾದ ಶ್ರೀ ಸುರೇಶ್ ಶೆಟ್ಟಿ ತಡಾಲ್, ಶ್ರೀ ಧನಂಜಯ ಅಮೀನ್, ಶ್ರೀ ರಮೇಶ್ ಭಟ್ ಕರ್ಜೆ, ಶ್ರೀ ಪ್ರತಾಪ್ ಹೆಗ್ಡೆ ಮಾರಾಳಿ, ಶ್ರೀ ರಾಜೇಶ್ ಶೆಟ್ಟಿ ಬಿರ್ತಿ, ಶ್ರೀ ಆದರ್ಶ ಶೆಟ್ಟಿ ಕೆಂಜೂರು, ಶ್ರೀ ನರಸಿಂಹ ನಾಯ್ಕ್, ಶ್ರೀ ದಿನೇಶ್ ಕೆಂಜೂರು, ಶ್ರೀ ಹರೀಶ್ ಶೆಟ್ಟಿ ಚೇರ್ಕಾಡಿ, ಶ್ರೀ ಕಮಲಾಕ್ಷ ಹೆಬ್ಬಾರ್, ಶ್ರೀ ಮನೋಜ್ ಶೆಟ್ಟಿ ಸಂತೆಕಟ್ಟೆ, ಶ್ರೀ ಕಿಟ್ಟಪ್ಪ ಅಮೀನ್, ಶ್ರೀ ನವೀನ್ ಪುತ್ರನ್ ಕರ್ಜೆ, ಕಳ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ನವೀನ್ ಪೂಜಾರಿ, ಕೊಕ್ಕರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಜಯಂತ್ ಪೂಜಾರಿ, ಗುತ್ತಿಗೆದಾರರಾದ ಶ್ರೀ ದೇವಿಪ್ರಸಾದ್ ಶೆಟ್ಟಿ, ಸ್ಥಳೀಯರಾದ ಸುಧಾ ಭಟ್,ಕೃಷ್ಣ ಪೂಜಾರಿ,ಬಾಲಕೃಷ್ಣ ಪೂಜಾರಿ, ಅಮಿತ ಶೆಟ್ಟಿ, ಸುಧಾಕರ ಸುವರ್ಣ, ಸತೀಶ್ ನಾಯಕ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular