ಉಡುಪಿ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ದ್ವಾರಕಾಮಯಿ ಮಠದ ಪೀಠಾಧಿಪತಿ ಶ್ರೀ ಸಾಯಿ ಈಶ್ವರ್ ಗುರೂಜಿಯವರ 108 ದಿನಗಳಲ್ಲಿ 108 ಕ್ಷೇತ್ರ ಪ್ರದಕ್ಷಿಣೆ 31 ದಿನ ದ ಸಂದಶ೯ನ ಶ್ರೀ ಕ್ಷೇತ್ರ ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಜುಲೈ 14 ಆದಿತ್ಯವಾರ ದಂದು ನಡೆಯಿತು.
ಈ ಸಂದಭ೯ದಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ ಆಶೀವ೯ಚನ ನೀಡಿ, ಹಿಂದೂ ಧಮ೯ದ ರಕ್ಷಣೆಗೆ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ. ಮತಾಂತರ ಮುಂತಾದ ವ್ಯಾಧಿ ನಮ್ಮ ಸಮಾಜದಿಂದ ದೂರವಾಗಬೇಕು. ಗಡಿಯಲ್ಲಿ ದೇಶ ರಕ್ಷಣೆ ಮಾಡುವ ಯೋಧರಿಗೆ ನೈತಿಕ ಬೆಂಬಲ ನೀಡುವ ಉದ್ದೇಶ ದಿಂದ ಈ ಕಾಯ೯ ನಡೆಯುತ್ತಿರುದಾಗಿ ಹೇಳಿದರು. ಕ್ಷೇತ್ರದ ವತಿಯಿಂದ ಆಡಳಿತ ಮೊಕ್ತೇಸರ ರಮೇಶ್ ನಾಯಕ್ ರವರುಗುರೂಜಿಯವರನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಗುರೂಜಿಯವರು ಬಿಲ್ವಪತ್ರ ಗಿಡ ಮತ್ತು ಮನವಿ ಪತ್ರವನ್ನು ಆಡಳಿತ ಮಂಡಳಿಯ ಸದಸ್ಯರಿಗೆ ನೀಡಿದರು. ನೀರೆ ಗ್ರಾ.ಪಂ ಮಾಜಿ ಅಧ್ಯಕ್ಷ ಸದಾನಂದ ಪ್ರಭು, ಪುರೋಹಿತ ರಮೇಶ್ ಭಟ್, ವಿಜಯ ಸಾಲಿಯಾನ್, ಚಂದ್ರಶೇಖರ ನಾಯಕ್, ಗಣೇಶ್ ನಾಯಕ್ , ದಯಾನಂದ ಪೂಜಾರಿ , ಸುಬ್ಬಣ್ಣ ಕಾಮತ್ , ಪೆಲತ್ತೂರು ಫ್ರೆಂಡ್ಸ್ ಕ್ಲಬ್ ಸದಸ್ಯರು, ಜಿ.ಪಂ ಮಾಜಿ ಸದಸ್ಯೆ ಗೀತಾಂಜಲಿ ಸುವಣ೯, ನಾಗನಂದ, ಶಿಲ್ಪಾ ಮಹೇಶ್ ಜತನ್, ಶಶಾಂಕ್, ಸತೀಶ್ ದೇವಾಡಿಗ, ನಿತೇಶ್ ಮುಂತಾದವರಿದ್ದರು.