ಬೆಂಗಳೂರು ಫೆಬ್ರವರಿ 5 ರಂದು ಕಲಾ ಕಲಾಗ್ರಣಿ ಪ್ರತಿಷ್ಠಾನದ ವತಿಯಿಂದ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮವನ್ನು ಮಲ್ಲೇಶ್ವರಂ ಸೇವಾ ಸದನದಲ್ಲಿ ಸಂಜೆ 5.15 ಕ್ಕೆ ಹಮ್ಮಿಕೊಳ್ಳಲಾಗಿದೆ.

ವಿದುಷಿ ಸೋನಿಯಾ ಪೊದುವಾಳ್ ರವರ ಮಾರ್ಗದರ್ಶನದಲ್ಲಿ ಸುಮಾರು 18 ಜನ ವಿದ್ಯಾರ್ಥಿಗಳು ಕು. ಪೂರ್ಣಿಮಾ ಸಿದ್ದಗಂಗಯ್ಯ, ಲಹರಿ, ನವ್ಯಶ್ರೀ, ತನಿಷ್ಕಾ, ಶ್ರಾವ್ಯ,ಕೃತಿ, ಅನನ್ಯ.ವಿ, ಅನನ್ಯ. ಎಂ.ಜೆ,ಪರಿವರ್ತನಾ, ತನ್ಮಯಿ, ವರ್ಷ ಜಾದವ್, ಲೇಖನ, ಮಾನ್ಯ, ಅದಿತಿ, ತೇಜಶ್ರೀ, ಇಂಪನ, ವಿಪುಲ ಇವರು ಎರಡ ರಿಂದ ಮೂರು ವರ್ಷ ದಿಂದ ಭರತನಾಟ್ಯ ಅಭ್ಯಾಸ ಮಾಡಿ ಮೊದಲ ಬಾರಿಗೆ ವೇದಿಕೆ ಪ್ರವೇಶಿಸುತ್ತಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಹೆಸರಾಂತ ಕೊಳಲು ವಾದಕರಾದ ವಿದ್ವಾನ್ ನರಸಿಂಹಮೂರ್ತಿ ರವರಿಗೆ ಗೌರವವನ್ನು ಸಲ್ಲಿಸಲಾಗುತ್ತಿದೆ.