ವಿಶ್ವಭಾರತಿ ಅಸೋಸಿಯೇಷನ್ ಗಣೇಶೋತ್ಸವ ಸಮಿತಿ ಚಿಟ್ಪಾಡಿ ಉಡುಪಿ ಶ್ರೀ ಶಾರದಾಂಭ ದೇವಸ್ಥಾನ ದಲ್ಲಿ ಪ್ರತಿಷ್ಠೆ ಗೊಂಡ 43 ನೇ ವರ್ಷದ ಶ್ರೀ ಗಣೇಶೋತ್ಸವವನ್ನು ಉಡುಪಿ ನಗರದಲ್ಲಿ ಹೆಚ್ಚು ದಿನಗಳ ಆಚರಣೆಯ ಗಣಪತಿ , ಶ್ರೀ ಶಾರದಾಂಭ ದೇವಸ್ಥಾನ ದಲ್ಲಿ ಪ್ರತಿಷ್ಠೆಗೊಂಡ ಶ್ರೀದೇವರ ಉತ್ಸವವು ಪ್ರತಿವರ್ಷ ದಂತೆ ಈ ಬಾರಿಯೂ ನಡೆಯುವ 9 ದಿನ ಕಾಲ ವಿಶೇಷ ಕಾರ್ಯಕ್ರಮ ದೊಂದಿಗೆ ನಡೆಯಲಿದೆ.
ಗಣೇಶೋತ್ಸವ ಸಮಿತಿ ವಾರ್ಷಿಕ ಮಹಾಸಭೆಯು 14 ರಂದು ಸಂಜೆ 6,30 ಕ್ಕೆ ನಡೆಯಲಿದೆ , 15 ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ , ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಸಂಜೆ ಶ್ರೀದೇವರ ವಿಸರ್ಜನಾ ಪೂಜೆ ಬಳಿಕ ಶ್ರೀ ಗಣೇಶ ಶೋಭಾಯಾತ್ರೆ ನಡಸಿ ಉಡುಪಿ ಶ್ರೀ ಲಕ್ಷ್ಮಿ ವೆಂಕಟೇಶ ದೇವಳದ ಪದ್ಮ ಸರೋವರದಲ್ಲಿ ವಿಸರ್ಜನೆ ನೆಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.