Friday, May 16, 2025
Homeಪುತ್ತೂರುಹಿರಿಯ ಕಿರಿಯ ಸಾಹಿತಿಗಳ ಅನುಭವ ಮತ್ತು ಸಾಹಿತ್ಯ ಚಿಂತನೆಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆ ಡಾ. ಹರ್ಷಕುಮಾರ್...

ಹಿರಿಯ ಕಿರಿಯ ಸಾಹಿತಿಗಳ ಅನುಭವ ಮತ್ತು ಸಾಹಿತ್ಯ ಚಿಂತನೆಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆ ಡಾ. ಹರ್ಷಕುಮಾರ್ ರೈ ಮಾಡಾವು ಅಭಿಮತ

ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು, ಗುರುಕುಲ ಕಲಾ ಪ್ರತಿಷ್ಠಾನ (ರಿ )ದಕ್ಷಿಣ ಕನ್ನಡ ಘಟಕದ ನೇತೃತ್ವದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಸಹಕಾರದಲ್ಲಿ, ಐ ಆರ್ ಸಿ ಎಂ ಡಿ ಶಿಕ್ಷಣ ಸಂಸ್ಥೆ ಪುತ್ತೂರು ಇಲ್ಲಿ ದಿನಾಂಕ :17.7.2024 ರಂದು ನಡೆದ ಮುಂಗಾರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ “ಚಿಗುರೆಲೆ ಸಾಹಿತ್ಯ ಬಳಗ ಕಳೆದ ಎರಡು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಬೆರೆತು ಕನ್ನಡಪರ ಕೆಲಸ ಮಾಡುವುದಲ್ಲದೇ ಹಿರಿಯ ಕಿರಿಯ ಸಾಹಿತ್ಯ ಮನಗಳನ್ನ ಒಟ್ಟಿಗೆ ಸೇರಿಸಿಕೊಂಡು ಹೊಸ ಹೊಸ ಯೋಜನೆ, ಯೋಚನೆಗಳ ಮುಖೇನ ಬೇರೆ ಬೇರೆ ಊರಿನ ಸಾಹಿತಿಗಳಿಗೆ ವೇದಿಕೆ ಒದಗಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವೆಂದರು”. ಸಮಾರಂಭದ ಉದ್ಘಾಟನೆಯನ್ನು ಐ ಆರ್ ಸಿ ಎಂ ಡಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಪ್ರಫುಲ್ಲ ಗಣೇಶ್ ದೀಪ ಬೆಳಗಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ದಿನ ಪತ್ರಿಕೆ ವರದಿಗಾರರು ಮತ್ತು ಹಿರಿಯ ಸಾಹಿತಿಗಳಾದ ಶ್ರೀ ಗಣೇಶ ಪ್ರಸಾದ ಪಾಂಡೇಲು, ಚಿಗುರೆಲೆ ಸಾಹಿತ್ಯ ಬಳಗದ ನಿರ್ವಾಹಕರಾದ ಕು. ಅಪೂರ್ವ ಕಾರಂತ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಹಿರಿಯ ಸಾಹಿತಿಗಳು ಮತ್ತು ಮಧು ಪ್ರಪಂಚ ಪತ್ರಿಕೆಯ ಸಂಪಾದಕರಾದ ಶ್ರೀ ನಾರಾಯಣ ರೈ ಕುಕ್ಕುವಳ್ಳಿ ಕವಿಗೋಷ್ಠಿಗೆ ಕವನ ವಾಚನ ಮಾಡುವ ಮೂಲಕ ಚಾಲನೆಗೈದರು.ವೇದಿಕೆಯಲ್ಲಿ ಎ. ವಿ. ಜಿ ಶಿಕ್ಷಣ ಸಂಸ್ಥೆಯ ಸಂಚಾಲಕರು ಮತ್ತು ಹಿರಿಯ ವಿದ್ವಾಂಸರಾದ ಶ್ರೀ ವೆಂಕಟ್ರಮಣ ಗೌಡ ಕಳುವಾಜೆ, ತುಳುಕೂಟ ಪುತ್ತೂರು ಇದರ ಅಧ್ಯಕ್ಷರಾದ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಉಪಸ್ಥಿತರಿದ್ದರು. ಕು. ತಶ್ವಿ ಶಾಂಭವಿ ಜೋಗಿಬೆಟ್ಟು ಪ್ರಾರ್ಥಿಸಿದರು. ಚಿಗುರೆಲೆ ಸಾಹಿತ್ಯ ಬಳಗದ ಶ್ರೀಕಲಾ ಕಾರಂತ್ ಅಳಿಕೆ ಸ್ವಾಗತಿಸಿ,ಕಾರ್ಯಕ್ರಮ ಸಂಯೋಜಕರಾದ ನಾರಾಯಣ ಕುಂಬ್ರ ಪ್ರಾಸ್ತಾವಿಕ ಮಾತುಗಳನ್ನಾಡಿ,ಶಶಿಧರ್ ಏಮಾಜೆ ಮತ್ತು ಅಕ್ಷತಾ ನಾಗನಕಜೆ ಸಭಾ ಕಾರ್ಯಕ್ರಮ ನಿರ್ವಹಿಸಿ,ಯಶಸ್ವಿ ಗಣೇಶ್ ಸೋಮವಾರಪೇಟೆ ವಂದಿಸಿದರು.
ಮುಂಗಾರು ಕವಿಗೋಷ್ಠಿ: ದೂರದ ವಿಜಯ ನಗರ ಜಿಲ್ಲೆಯ ಶಿಕ್ಷಕಿ ಮತ್ತು ಯುವ ಕವಯತ್ರಿ ವೀರಮ್ಮ ಕೆ ಸೋಗಿ ಇವರ ಅಧ್ಯಕ್ಷತೆಯಲ್ಲಿ ಮುಂಗಾರು ಕವಿಗೋಷ್ಠಿ ನಡೆಯಿತು. ಕವಿಗೋಷ್ಠಿ ಅಧ್ಯಕ್ಷತೆಯನ್ನು ವಹಿಸಿ “ಹಿರಿಯ ಕವಿಗಳ ಕೃತಿಗಳ ನಿರಂತರ ಅಧ್ಯಯನಶೀಲತೆಯಿಂದ ಸಾಧ್ಯ ಮತ್ತು ನಿಸರ್ಗವೇ ಪ್ರತಿಯೊಂದಕ್ಕೂ ಉತ್ತರ, ನಿಸರ್ಗದಂತೆ ನಾವೆಲ್ಲ ಬಾಳೋಣ, ಪ್ರತಿಯೊಂದು ಕವಿಗಳ ಶೀರ್ಷಿಕೆಯನ್ನು ಕವಿತೆಯಾಗಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು”
ಕವಿಗೋಷ್ಠಿಯಲ್ಲಿ “ಶಿರ್ಷಿತಾ ಕಾರಂತ್ ಅಳಿಕೆ, ಸುರೇಶ್ ಕುಮಾರ್ ಚಾರ್ವಾಕ, ಧನ್ವಿತಾ ಕಾರಂತ್ ಅಳಿಕೆ, ಕೇಶವ ನೆಲ್ಯಾಡಿ, ನವ್ಯ ಪ್ರಸಾದ್ ನೆಲ್ಯಾಡಿ,ಮಣಿ ಪಡ್ನೂರು, ಗಿರೀಶ್ ಉಪ್ಪಿನಂಗಡಿ, ಶ್ರೀಕಲಾ ಕಾರಂತ್ ಅಳಿಕೆ, ಶ್ರುತಿಕಾ ಓಜಾಲ, ಯಶಸ್ವಿ ಗಣೇಶ್ ಸೋಮವಾರಪೇಟೆ, ಜಯರಾಮ್ ಪಡ್ರೆ,ಚಂದ್ರಹಾಸ ಕುಂಬಾರ ಬಂದಾರು, ಸುನೀತಾ ಶ್ರೀರಾಮ್ ಕೊಯಿಲ, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ಮಂಜುಶ್ರೀ ನಲ್ಕ, ರಾಮಕೃಷ್ಣ ಉಪ್ಪಿನಂಗಡಿ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ನಾರಾಯಣ ನಾಯ್ಕ್ ಕುದ್ಕೊಳ್ಳಿ, ತಶ್ವಿ ಶಾಂಭವಿ, ತಸ್ಮಯ್ ಪಂಚೋಡಿ, ಕು. ಶ್ರೇಯ ಶೆಟ್ಟಿ, ಅಕ್ಷತಾ ನಾಗನಕಜೆ, ತನ್ಮಯ್ ಪಂಚೋಡಿ, ಮುಝಮಿಲ್ ಕರಾಯ, ಶಿಲ್ಪಾ. ಕೆ. ಎನ್., ಸಂಜೀವ ಮಿತ್ತಳಿಕೆ, ಆಶಾ ಅಡೂರ್, ಪ್ರತೀಕ್ಷಾ ಆರ್ ಕಾವು, ಧೃತಿ ಕಲ್ಲಾಜೆ ವಿಟ್ಲ, ಹರಿಣಾಕ್ಷಿ ಉಮೇಶ್ ನೇರಳಕಟ್ಟೆ, ಶಶಿಧರ್ ಏಮಾಜೆ, ಪ್ರತೀಕ್ಷಾ ಐತಾಳ್ ತಂಟೆಕ್ಕು, ಬಿಂಧ್ಯ ಕೆ. ಜೆ, ಐಶ್ವರ್ಯ ರೈ ನೆಲ್ಯಾಡಿ, ಪಾವನ ಜಿ ಪದ್ಯಾಣ,ಅಧೀಶ್ ಕೃಷ್ಣ ಅಡೂರ್,ಉಮಾಶಂಕರಿ ಮರಿಕೆ,ಫಾತಿಮತ್ ಜಸೀಲಾ ಕನ್ಯಾನ, ಪ್ರಜ್ಞಾ ಕೊಣಲೆ, ಮೋಕ್ಷ ಶಂಭೂರು, ಶ್ರೀಮತಿ ಐಡಾ ಲೋಬೋ ಮಾಣಿ, ಪೂಜಾ ಪದ್ಯಾಣ, ಅಪೂರ್ವ ಕಾರಂತ್, ಲಕ್ಷ್ಮಿ ನಾರಾಯಣ ಮಾಣಿ ಭಾಗವಹಿಸಿದ್ದರು.ಕವಿಗೋಷ್ಠಿಯನ್ನು ಪ್ರಿಯಾ ಸುಳ್ಯ ಮತ್ತು ಆಶಾ ಅಡೂರ್ ನಿರೂಪಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

RELATED ARTICLES
- Advertisment -
Google search engine

Most Popular