Monday, May 12, 2025
Homeಧಾರ್ಮಿಕಪುರಿಯಲ್ಲಿ ರಥಯಾತ್ರೆ ವೇಳೆ ಕಾಲ್ತುಳಿತಕ್ಕೆ ಓರ್ವ ಬಲಿ

ಪುರಿಯಲ್ಲಿ ರಥಯಾತ್ರೆ ವೇಳೆ ಕಾಲ್ತುಳಿತಕ್ಕೆ ಓರ್ವ ಬಲಿ

ಉತ್ತರ ಪ್ರದೇಶದ ಹತ್ರಾಸ್‌ ಘಟನೆ ಮಾಸುವ ಮುನ್ನವೇ ಪುರಿ ಜಗನ್ನಾಥ ರಥ ಯಾತ್ರೆಯಲ್ಲೂ ಅಂತಹ ಘಟನೆ ಮರುಕಳಿಸಿದೆ. ನಂಬಿಕೆ ಮತ್ತು ಭಕ್ತಿಯ ಹಬ್ಬವಾಗಿದ್ದ ಒಡಿಶಾದ ಪುರಿಯಲ್ಲಿ ಬಲಭದ್ರನ ರಥ ತಾಳಧ್ವಜವನ್ನು ಎಳೆಯುವಾಗ ಕಾಲ್ತುಳಿತ ಭಾನುವಾರ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಓರ್ವ ಭಕ್ತ ಸಾವನ್ನಪ್ಪಿದ್ದಾನೆ.

400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಕಾಲ್ತುಳಿತದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ.

ಗಾಯಾಳುಗಳನ್ನು ಪುರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಆರೋಗ್ಯ ಸಚಿವ ಮುಖೇಶ್ ಮಹಾಲಿಂಗ್ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.

ಭಾನುವಾರ ಪುರಿಯಲ್ಲಿ ರಥಯಾತ್ರೆಯ ಸಂಭ್ರಮ ಉತ್ತುಂಗದಲ್ಲಿತ್ತು. ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಜಮಾಯಿಸಿದ್ದರು. ಸಂಜೆ 5:20ರ ಸುಮಾರಿಗೆ ಪುರಿಯ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ರಥಗಳಿಗೆ ಪೂಜೆ ಸಲ್ಲಿಸಿ ಚೇರ ಪಹಾರ ವಿಧಿವಿಧಾನ ನೆರವೇರಿಸಿದರು.

ಇದಾದ ಬಳಿಕ ಬಲಭದ್ರ ದೇವರ ರಥ ತಾಳಧ್ವಜ ಎಳೆಯುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಜನಸಂದಣಿ ನಿಯಂತ್ರಣ ತಪ್ಪಿತು. ಕೆಲವೇ ಸಮಯದಲ್ಲಿ ಕಾಲ್ತುಳಿತ ಸಂಭವಿಸಿ ಜನ ಓಡಲು ಪ್ರಾರಂಭಿಸಿದರು ಮತ್ತು ಒಬ್ಬರ ಮೇಲೆ ಒಬ್ಬರು ಬಿದ್ದಿದ್ದಾರೆ. ಕಾಲ್ತುಳಿತ ಎಷ್ಟು ತೀವ್ರವಾಗಿತ್ತು ಎಂದರೆ ಜನರು ಚೇತರಿಸಿಕೊಳ್ಳಲು ಅವಕಾಶ ಸಿಗಲಿಲ್ಲ.

ಗಾಯಾಳುಗಳನ್ನು ಪುರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವುದನ್ನು ಕಂಡು ಎಲ್ಲರ ಮನ ಕಲುಕಿದೆ. ವೈದ್ಯರ ತಂಡ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿದೆ. ಅನೇಕ ಗಾಯಾಳುಗಳನ್ನು ಆಮ್ಲಜನಕದ ಮೇಲೆ ಇರಿಸಲಾಗಿದೆ.

ಈ ಅಪಘಾತದಲ್ಲಿ ಮೃತಪಟ್ಟ ಭಕ್ತನ ಗುರುತು ಪತ್ತೆಯಾಗಿಲ್ಲ. ಆತನ ಕುಟುಂಬ ಸದಸ್ಯರ ಪತ್ತೆಗೆ ಪೊಲೀಸರು ಯತ್ನಿಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಮೃತ ಭಕ್ತ ಒಡಿಶಾದ ಹೊರಗಿನವರು.

ಈ ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ಮುಖೇಶ್ ಮಹಾಲಿಂಗ್, ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ. ಅಪಘಾತದ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

RELATED ARTICLES
- Advertisment -
Google search engine

Most Popular