Tuesday, May 13, 2025
Homeಉಜಿರೆಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಬೋಳಿಯಾರು ಇವರ 2024-25 ಸಾಲಿನ ಕೃಷಿ ವಿಸ್ತರಣಾ ಕಾರ್ಯಕ್ರಮ

ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಬೋಳಿಯಾರು ಇವರ 2024-25 ಸಾಲಿನ ಕೃಷಿ ವಿಸ್ತರಣಾ ಕಾರ್ಯಕ್ರಮ

ಓಂ ಶ್ರೀ ಮಂಜುನಾಥಾಯ ನಮ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ರಿಜಿಸ್ಟರ್ ಮಂಗಳೂರು ತಾಲೂಕು
ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ ವೀರೇಂದ್ರಹೆಗ್ಗಡೆಯವರ ಮತ್ತು ಮಾತೃಶ್ರೀಯ ಹೇಮಾವತಿ ಅಮ್ಮನವರ ಶುಭ ಆಶೀರ್ವಾದದೊಂದಿಗೆ 2024-25 ಸಾಲಿನ ಕೃಷಿ ವಿಸ್ತರಣಾ ಕಾರ್ಯಕ್ರಮದ ಅಡಿಯಲ್ಲಿ ಯಾಂತ್ರಿಕೃತ ಭತ್ತ ಬೇಸಾಯ (ಭತ್ತ ನಾಟಿ ) ಕಾರ್ಯಕ್ರಮವನ್ನು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಬೋಳಿಯಾರು ಇವರ ಸಯೋಗದೊಂದಿಗೆ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓಡಕಿನ ಕಟ್ಟೆ ರಾಮಮಂದಿರದ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ ವಹಿಸಿದ್ದರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಒಕ್ಕೂಟದ ಕಾರ್ಯದರ್ಶಿ ಶ್ರೀಯುತ ಲಕ್ಷ್ಮೀಶ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಸ್ವಾಗತಿಸಿದರು. ನಂತರ ಪ್ರಸ್ತಾವಿಕವಾಗಿ ಮಂಗಳೂರು ತಾಲೂಕಿನ ಕೃಷಿ ಅಧಿಕಾರಿಯಾದ ಮೋಹನ್ ರವರು ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಭತ್ತ ಕೃಷಿ ಇಂದ ದೂರವಾಗುತ್ತಿದ್ದು ಕೇವಲ ವಾಣಿಜ್ಯ ಬೆಳೆಗಳ ಕಡೆ ಮಾತ್ರ ಒಲವನ್ನು ತೋರುತ್ತಿದ್ದು ಭತ್ತದ ಕೃಷಿಯ ಕಡೆ ಹೆಚ್ಚಿನ ಒಲವನ್ನು ನೀಡಬೇಕೆಂದು ತಿಳಿಸಿದರು.

ನಂತರ ನಾಟಿ ಯಂತ್ರ ಬ್ಯಾಂಕಿನ ಕೃಷಿ ಮೇಲ್ವಿಚಾರಕರಾದ ಉಮೇಶ್ ರವರು ಯಾಂತ್ರಿಕೃತ ಬತ್ತ ಬೇಸಾಯದ ಬಗ್ಗೆ ಸವಿಸ್ತಾರವಾದ ನೀಡಿದರು. ಯಾಂತ್ರಿಕೃತ ಬೇಸಾಯ ಮಾಡುವುದರಿಂದ ಹಾಗೂ ಆ ಪ್ರಯೋಜನಗಳನ್ನು ತಿಳಿಸಿದರು ಒಕ್ಕೂಟದ ಪದಾಧಿಕಾರಿಗಳು ಹಾಗೂ ಪ್ರಗತಿಪರ ಕೃಷಿಕರು ಹಾಗೂ ಕೊಣಜೆ ವಲಯದ ಮೇಲ್ವಿಚಾರಕರದ ಮಾಧವ chsc ಪ್ರಬಂಧಕರು ಶಿವಕುಮಾರ್ ಹಾಗೂ ಸೇವಾ ಪ್ರತಿನಿಧಿ ಲೀಲಾ ಹಾಗೂ ಸರ್ವರ ಉಪಸ್ಥಿತಿಯಲ್ಲಿ ಜನಾರ್ಧನ್ ರವರಿಗೆ ಭತ್ತದ ಸಸಿಯನ್ನು ಹಸ್ತಾಂತರ ಮಾಡಲಾಯಿತು ಒಕ್ಕೂಟದ ಉಪಾಧ್ಯಕ್ಷರಾದ ಲತಾ ಅವರು ಅಭಿನಂದಿಸಿದರು.

RELATED ARTICLES
- Advertisment -
Google search engine

Most Popular