ಇಂಚರ ಕಲಾವಿದರು ಮಂಗಳೂರು ತಂಡದ ಈ ವರ್ಷದ ವಿಭಿನ್ನ ಶೈಲಿಯ ಭಯಾನಕ ಹಾಗೂ ಹಾಸ್ಯಭರಿತ ನಾಟಕ ಆದಷ್ಟು ಬೇಗೆ ತೆರೆ ಕಾಣಲಿದೆ.
ರಕ್ಷಿತ್ ಅಮೀನ್ ಕೊಲ್ಯ ಇವರ ಸಾರತ್ಯದಲ್ಲಿ, ಸುಜಿತ್ ಕೋಟೆಕಾರ್ ರವರ ಸಂಚಾಲಕತ್ವದಲ್ಲಿ ಮೂಡಿಬರಲಿದೆ,
“ಅಜನೆ ಆಪುಂಡುಗೆ ” ನಾಟಕ. ಹೊಸ ಶೈಲಿಯ , ವಿಭಿನ್ನ ದೃಶ್ಯದೊಂದಿಗೆ ಮೂಡಿಬರಲಿದೆ.
ಈ ನಾಟಕದ ಕಥೆ, ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನವನ್ನು ವಿನಯ್ ಕುಮಾರ್ ಅದ್ಯಪಾಡಿ ಮಾಡಿದ್ದಾರೆ. ಹಾಗೇ ನಾಟಕದ ಸಂಗೀತ ಮತ್ತು ಗಾಯನ ಆದಿತ್ಯ ಆಚಾರ್ಯ ಪರ್ಕಳ, ನಾಟಕದ ಸಾಹಿತ್ಯ ಅಮರ್ ನಾಥ್ ಪೂಪಾಡಿಕಲ್, ತಂಡಕ್ಕೆ ಸಹಕಾರ ನೀಡಿದವರು ಹರೀಶ್ ಕೊಟ್ರಗುತ್ತು, ಮೇಕಪ್ ಚೇತನ್ ಪೂಜಾರಿ ಕಲ್ಲಡ್ಕ, ಸ್ವರ ಬೊಲ್ಪು ತುಳಸಿ ಸೌಂಡ್ಸ್ ಪರ್ಕಳ, ಹಾಗೇ ರಂಗ ವಿನ್ಯಾಸ ಚಾಮುಂಡಿ ಆರ್ಟ್ಸ್ ಕುಡ್ಲ, ರಂಗ ಭೂಮಿಯಲ್ಲಿ ಹೆಸರು ಪಡೆದಿರುವ ಕಲಾವಿದರ ಜೊತೆಗೆ ಹೊಸ ಕಲಾವಿದರು ಅಭಿನಯ ಮಾಡಿದ್ದಾರೆ. ಆಗಷ್ಟ್ ತಿಂಗಳಿನಲ್ಲಿ ಈ ನಾಟಕ ಬಿಡುಗಡೆಗೊಂಡು ಮೊದಲ ಪ್ರದರ್ಶನ ನೀಡಲಿದೆ.