ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ,ಉಡುಪಿ ವಿಶ್ವಗೀತಾ ಪರ್ಯಾಯ 2024-2026 ನಟಿ ವಿಜಯಲಕ್ಷ್ಮೀಸಿಂಗ್ ಹಾಗೂ ಬೆಂಗಳೂರಿನ ಡಾ.ಜ್ಯೋತಿಕಾ ಅವರು ಪುತ್ತಿಗೆ ಶ್ರೀ ಪಾದರನ್ನು ಭೇಟಿ ಮಾಡಿ , ತಾವು ಗೀತೆ ಬರೆದದ್ದರಿಂದ ತಮಗಾದ ಸಂತೋಷವನ್ನು ವ್ಯಕ್ತಪಡಿಸಿ , ತಾವು ಬರೆದ ಗೀತಾಪುಸ್ತಕವನ್ನು ಸಮರ್ಪಿಸಿ ಸುವರ್ಣ ಪಾರ್ಥಸಾರಥಿ ರಥಕ್ಕೆ ಸುವರ್ಣ ಸಮರ್ಪಿಸಿದರು.
ಅವರ ಪರವಾಗಿ ಗಾಯಕ ಶ್ರೀ ಮಧೂರು ನಾರಾಯಣ ಶರಳಾಯ ಅವರು ಗುರುಗಳಿಗೆ ಶಾಲುಹೊದಿಸಿ, ಝರಿಪೇಟವನ್ನು ತೊಡಿಸಿ ಗೌರವಿಸಿದರು. ಗುರುಗಳು ಅವರಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.


