Friday, May 16, 2025
Homeಮಂಗಳೂರುಕಾಟುಕುಕ್ಕೆಯ ಅರೆಕ್ಕಾಡಿಯಲ್ಲಿ ಎಣ್ಮಕಜೆ ಕುಟುಂಬಶ್ರೀ ಸಿಡಿಎಸ್ ನ ವರ್ಷ ಋತು ಸಂಭ್ರಮ

ಕಾಟುಕುಕ್ಕೆಯ ಅರೆಕ್ಕಾಡಿಯಲ್ಲಿ ಎಣ್ಮಕಜೆ ಕುಟುಂಬಶ್ರೀ ಸಿಡಿಎಸ್ ನ ವರ್ಷ ಋತು ಸಂಭ್ರಮ


ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತು ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ಜರಗಿದ
ವರ್ಷ ಋತು ಸಂಭ್ರಮ (ಮಯ ಪೊಲಿಮ) ಕಾರ್ಯಕ್ರಮ ಮಕ್ಕಳಿಗೆ ಮಹಿಳೆಯರಿಗೆ ಮತ್ತು ಮನೆಯವರಿಗೆ ಆಹ್ಲಾದಕರ ವಾತಾವರಣ ಸೃಷ್ಠಿಗೆ ಕಾರಣವಾಯಿತು. ಕಾಟುಕುಕ್ಕೆ ಸಮೀಪದ ಅರೆಕ್ಕಾಡಿ ಗದ್ದೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ಸಹಿತ ಮಹಿಳೆಯರು ಗದ್ದೆಗಿಳಿದು ವಿವಿಧ ಆಟೋಟಗಳೊಂದಿಗೆ ಸಂಭ್ರಮಿಸಿದರು. ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು.ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪೆರ್ಲ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷೆ ಶ್ಯಾಮಲ ಭಟ್, ಕುಟುಂಬಶ್ರೀ ಮೆಂಬರ್ ಸೆಕ್ರಟರಿ ಗಿರೀಶ್ ಟಿ,ಎಣ್ಮಕಜೆ ಪಂ.ಸದಸ್ಯ ಶಶಿಧರ, ಕುಸುಮಾವತಿ, ಮಾಜಿ ಪಂ.ಸದಸ್ಯ ಶ್ರೀಧರ ಮಣಿಯಾಣಿ, ಮಾಜಿ ಪಂ.ಉಪಾಧ್ಯಕ್ಷೆ ಆಯಿಷಾ ಎ.ಎ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಹಿರಿಯ ಕೃಷಿಕರಾದ ಅಚ್ಚುತ್ತ ಮಣಿಯಾಣಿ,ನಾರಾಯಣ ಮಣಿಯಾಣಿ ಅವರನ್ನು ಸನ್ಮಾನಿಸಲಾಯಿತು.ಎಸ್ಸಸ್ಸೆಲ್ಸಿ ಮತ್ತು ಪ್ಲಸ್ ಟು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪಂಚಾಯತು ಮಟ್ಟದ ಕುಟುಂಬಶ್ರೀ ಸದಸ್ಯೆಯರ ಮಕ್ಕಳನ್ನು ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಸಿಡಿಎಸ್ ಉಪಾಧ್ಯಕ್ಷೆ ಶಶಿಕಲಾ ಸ್ವಾಗತಿಸಿ ಸಿಸಿಲಿಯಾ ವಂದಿಸಿದರು.

RELATED ARTICLES
- Advertisment -
Google search engine

Most Popular