Tuesday, May 13, 2025
Homeಮಂಗಳೂರುವಾರ್ಷಿಕ ಅಂಚೆ ಪ್ರಶಸ್ತಿ ಪ್ರಧಾನ

ವಾರ್ಷಿಕ ಅಂಚೆ ಪ್ರಶಸ್ತಿ ಪ್ರಧಾನ


ಮಂಗಳೂರು ಅಂಚೆ ವಿಭಾಗದ 2023 24ನೇ ಸಾಲಿನ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದು ಇದಕ್ಕೆ ಕಾರಣರಾದ ಅಂಚೆ ಸಿಬ್ಬಂದಿಗಳನ್ನು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಕರ್ನಾಟಕ ವಲಯದ ಅಂಚೆ ಸೇವೆಗಳ ನಿರ್ದೇಶಕರಾದ ಸಂದೇಶ ಮಹಾದೇವಪ್ಪ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ಪ್ರಧಾನ ಮಾಡಿದರು. ಮಂಗಳೂರು ಅಂಚೆ ವಿಭಾಗ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಯಾವತ್ತೂ ಮಂಚೂಣಿಯಲ್ಲಿದ್ದು ಇಲ್ಲಿನ ಅಂಚೆ ಸಿಬ್ಬಂದಿಗಳ ಸೇವೆಯನ್ನು ಶ್ಲಾಘಿಸಿದರು ಮತ್ತು ಸರಕಾರಿ ಸೇವೆಯನ್ನು ನೀಡುವಲ್ಲಿ ಆರೋಗ್ಯಕರ ಸ್ಪರ್ಧೆ ಇದ್ದಲ್ಲಿ ಇಲಾಖೆ ಇನ್ನಷ್ಟು ಜನರಿಗೆ ಹತ್ತಿರವಾಗುವುದು ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಂಗಳೂರು ವಿಭಾಗದ ಹಿರಿಯ ಅಂಚೆ ಅಧಿಕರಾದ ಸುಧಾಕರ ಮಲ್ಯ 2023-24ರಲ್ಲಿ ಮಂಗಳೂರು ಅಂಚೆ ವಿಭಾಗದ ಸಾಧನೆಗಳ ಬಗ್ಗೆ ವಿವರಿಸಿದರು ಮತ್ತು ಅಂಚೆ ಜನ ಸಂಪರ್ಕ ಅಭಿಯಾನಗಳ ಮೂಲಕ ಅಂಚೆ ಸೇವೆಯನ್ನು ಜನರ ಮನೆ ಬಾಗಿಲಿನಲ್ಲಿ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು. ವಿವಿಧ ಅಂಚೆ ಸೇವೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅಂಚೆ ಸಿಬ್ಬಂದಿಗಳಿಗೆ ಸುಮಾರು 70ಕ್ಕೂ ಅಧಿಕ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು. ಉಪ ಅಂಚೆ ಅಧಿಕರಾದ ದಿನೇಶ್ ಪಿ. ಸ್ವಾಗತಿಸಿ ವರಿಷ್ಠ ಅಂಚೆಪಾಲಕ ಶ್ರೀನಾಥ್ ಎಂ. ಬಿ. ವಂದಿಸಿದರು. ಸಹಾಯಕ ಅಂಚೆ ಅಧೀಕ್ಷಕರಾದ ಸಿಪಿ ಹರೀಶ್, ಮೇಲ್ವಿನ್ ಲೋಬೋ ನಿರೀಕ್ಷಕರಾದ ಪ್ರದೀಪ್ ಭಂಡಾರಿ ಐಪಿಪಿಬಿ ವ್ಯವಸ್ಥಾಪಕ ಶಿಹಾಸ್, ಅಂಚೆಪಾಲಕ ಕಿರಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಅಕ್ಷತಾ ನಾಯಕ್ ಕಾರ್ಯಕ್ರಮವನ್ನು ನಿರ್ವಹಿಸಿದರು.

RELATED ARTICLES
- Advertisment -
Google search engine

Most Popular