Monday, May 19, 2025
Homeಧಾರ್ಮಿಕಶ್ರೀ ಗುಡೇ ಮಹಾಲಿಂಗೇಶ್ವರ ದೇವಾಸ್ಥಾನ ಹೇರಂಜಾಲು ವಾರ್ಷಿಕ ಶ್ರೀ ಮನ್ಮಹಾ ರಥೋತ್ಸವ ಸಂಪನ್ನ

ಶ್ರೀ ಗುಡೇ ಮಹಾಲಿಂಗೇಶ್ವರ ದೇವಾಸ್ಥಾನ ಹೇರಂಜಾಲು ವಾರ್ಷಿಕ ಶ್ರೀ ಮನ್ಮಹಾ ರಥೋತ್ಸವ ಸಂಪನ್ನ

ಬೈಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಗುಡೇ ಮಹಾಲಿಂಗೇಶ್ವರ ದೇವಾಸ್ಥಾನ ಹೇರಂಜಾಲು ವಾರ್ಷಿಕ ಶ್ರೀ ಮನ್ಮಹಾ ರಥೋತ್ಸವ ಸಡಗರ ಸಂಭ್ರಮದಲ್ಲಿ ನೆಡೆಯಿತು.

ಬೆಳಿಗ್ಗೆ ಗಂಟೆ 7-00ಕ್ಕೆ : ಪ್ರಾತಃಕಾಲ ಪೂಜೆ, ನಿತ್ಯಬಲಿ, ರಥಶುದ್ಧಿ ಹೋಮ, ಶತರುದ್ರಾಭಿಷೇಕ ಶತರುದ್ರಾಭಿಷೇಕದ ಸೇವಾಕರ್ತರು : ಶೀಲಾ & ಜಯಶೀಲ ಶೆಟ್ಟಿ ಮತ್ತು ಮಕ್ಕಳು, ಘಟಪ್ರಭಾ ಹಾಗೂ ರಥಬಲಿ, ಕ್ಷೇತ್ರಪಾಲ ಬಲಿ ,ರಥಾರೋಹಣ,ಶ್ರೀ ಮನ್ಮಹಾರಥೋತ್ಸವವು ಶ್ರೀ ಆಗಮ ವಿದ್ಯಾವಾರಧಿ ಕಟ್ಟೆ ಶಂಕರ್ ಭಟ್ಟರ ಆಚಾರ್ಯತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಸಾನಿಧ್ಯದಲ್ಲಿ ಸಂಪನ್ನಗೊಂಡಿತು

ಮಹಾಅನ್ನಸಂತರ್ಪಣೆ ನಡೆಯಿತು ಸೇವಾಕರ್ತರು ನಾಗಮ್ಮ ದೇವಾಡಿಗ ಸ್ಮರಣಾರ್ಥ ಸ್ಮಿತಾ ಮತ್ತು ಶ್ರೀ ಪ್ರಕಾಶ್ ದೇವಾಡಿಗ ಮತ್ತು ಮಕ್ಕಳು ತ್ರಾಸಿಮನೆ ಹೇರಂಜಾಲು ಸೇವೆಯನ್ನು ಸಮರ್ಪಿಸಿದರು. ಮಧ್ಯಾಹ್ನ 3ಗಂಟೆಗೆ ವಾದ್ಯಗೋಷ್ಠಿ, ಚಂಡೆವಾದನ ಸಾನಿಧ್ಯದಲ್ಲಿ ನಡೆಯಿತು.

ಸಂಜೆ 5-30ಕ್ಕೆ ವಿವಿಧ ಟ್ಯಾಬ್ಲೆಗಳ ಮೂಲಕ ಭವ್ಯ ಮೆರವಣಿಗೆ ಮೂಲಕ ಸಂಜೆ ನಡೆದ ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು ಹಾಗೂ 8-00ಕ್ಕೆ : ಭೂತ ಬಲಿ, ಶಯನೋತ್ಸವ ಶ್ರೀ ಸಾನಿಧ್ಯದಲ್ಲಿ ಸಂಪನ್ನಗೊಂಡಿತು.


ಶ್ರೀ ಎಚ್ ಜಯಶೀಲ್ ಶೆಟ್ಟಿ ಗೌರವಾಧ್ಯಕ್ಷರು, ಜೀರ್ಣೋದ್ಧಾರ ಸಮಿತಿ ಅವರು ಮಾತನಾಡಿ ಈ ವರ್ಷ ಜಾತ್ರೆ ಅದ್ದೂರಿನಿಂದ ನಡೆದಿದೆ ಮುಂದಿನ ವರ್ಷ ಜಾತ್ರೆಯ ಒಳಗೆ ಭವ್ಯ ರಾಜಗೋಪುರ ಮತ್ತು ದೇವಸ್ಥಾನದ ಪೌಳಿ ಲೋಕಾರ್ಪಣೆ ಮಾಡಲಿದ್ದೇವೆ ಈ ಎಲ್ಲ ಕಾರ್ಯಕ್ರಮಕ್ಕೆ ಸಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸಿ ಗೊಳಿಸಬೇಕಾಗಿ ವಿನಂತಿಸಿದರು

ದೇವಾಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಹೆಚ್. ಪದ್ಮನಾಭ ಮೇರ್ಟ ಅವರು ಮಾತನಾಡಿ ವರ್ಷಂಪ್ರತಿ ನಡೆಯುವ ಈ ಜಾತ್ರೆಯು ಈ ವರ್ಷ ಬಹಳ ಅದ್ದೂರಿಯಿಂದ ನಡೆದಿದೆ ಹಾಗೆ ಭವ್ಯ ರಾಜಗೋಪುರ ಜಯಶೀಲ ಶೆಟ್ಟಿ ನೇತೃತ್ವದಲ್ಲಿ ಮುಂದಿನ ವರ್ಷ ಲೋಕಾರ್ಪಣೆ ಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀ ಹೆಚ್. ವಿಜಯ್‌ ಶೆಟ್ಟಿ ಖಜಾಂಚಿ, ಪ್ರಧಾನ ಅರ್ಚಕರು, ಶ್ರೀ ಗುಡೇ ಮಹಾಲಿಂಗೇಶ್ವರ ಗೆಳಯರ ಬಳಗ (ರಿ) ಹೇರಂಜಾಲು,ಹಳೆ ವಿದ್ಯಾರ್ಥಿ ಸಂಘ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೇರಂಜಾಲು,ಶ್ರೀ ಗುಡೇ ಮಹಾಲಿಂಗೇಶ್ವರ ಭಜನಾ ಮಂಡಳಿ ಹೇರಂಜಾಲು,ಆಡಳಿತ ಮಂಡಳಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ದತ್ತಿನಿಧಿ ಸದಸ್ಯರು, ದೇವಳದ ತಂತ್ರಿಗಳು, ಅರ್ಚಕರು, ಸಿಬ್ಬಂದಿಗಳು ಹಾಗೂ ಊರ ಹತ್ತು ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular