Monday, May 12, 2025
Homeಉಡುಪಿಆಂಟಿಬಯಾಟಿಕ್ ಬಳಕೆಯ ಸಾರ್ವಜನಿಕ ಜಾಗೃತಿ  ಪತ್ರದ ಬಿಡುಗಡೆಯ ಕಾರ್ಯಕ್ರಮ

ಆಂಟಿಬಯಾಟಿಕ್ ಬಳಕೆಯ ಸಾರ್ವಜನಿಕ ಜಾಗೃತಿ  ಪತ್ರದ ಬಿಡುಗಡೆಯ ಕಾರ್ಯಕ್ರಮ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಔಷಧ ನಿಯಂತ್ರಣ ಇಲಾಖೆ ಇವರ ಜಂಟಿ ಸಹಭಾಗಿತ್ವದ ಆಂಟಿಬಯಾಟಿಕ್ ಬಳಕೆಯ ಸಾರ್ವಜನಿಕ ಜಾಗೃತಿ  ಪತ್ರದ ಬಿಡುಗಡೆಯ ಕಾರ್ಯಕ್ರಮ ದಿನಾಂಕ 18.09.2024 ಬುಧವಾರದಂದು ಉಡುಪಿ ಜಿಲ್ಲಾ ಔಷಧಿ ವ್ಯಾಪಾರ ಸಂಘದ ಕಚೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಅಮ್ಮುಂಜೆ ರಮೇಶ್ ನಾಯಕ್ ಅಧ್ಯಕ್ಷರು ಉಡುಪಿ ಜಿಲ್ಲಾ ಔಷದ ವ್ಯಾಪಾರಸ್ಥರ ಸಂಘ ವಹಿಸಿ ಎಲ್ಲರನ್ನು ಸ್ವಾಗತಿಸಿದರು . 

ಪತ್ರದ ಬಿಡುಗಡೆಯನ್ನು ಸಹಾಯಕ ಔಷದ ನಿಯಂತ್ರಕರಾದ ಶಂಕರ್ ನಾಯಕ್ ಅವರು ನೆರವೇರಿಸಿ, ಮಾಹಿತಿಯ ಕೊರತೆಯಿಂದ ಆಂಟಿ ಬಯೋಟಿಕ್ ಔಷಧಿಗಳು ದುರ್ಬಳಕೆಯಾಗುತ್ತಿದ್ದು, ವೈದ್ಯರು ಸೂಚಿಸಿದ ಆಂಟಿಬಯೋಟಿಕ್ ಅನ್ನು ಸಂಪೂರ್ಣವಾಗಿ ಬಳಕೆ ಮಾಡದೇ ಇರುವುದರಿಂದ  ಪ್ರತಿಜೀವಕಗಳು ಪ್ರತಿರೋದಕ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದು ಹೆಚ್ಚಿನ ಅಂಟಿಬಯೋಟಿಕ್ ಔಷಧಿಗಳು  ಜನರ ದೇಹದಲ್ಲಿ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಇದು ಮುಂದಿನ ದಿನಗಳಲ್ಲಿ ಬಾರಿ ಅಪಾಯಕಾರಿಯಾಗಿ ಪರಿಣಮಿಸಬಲ್ಲದು ಹಾಗಾಗಿ ಎಲ್ಲರೂ ಈಗಲೇ ಎಚ್ಚತ್ತುಕೊಳ್ಳಬೇಕು. ವಿಶೇಷವಾಗಿ ಔಷದಿ ವ್ಯಾಪಾರಸ್ಥರು ಈ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಈ ಸಂಧರ್ಭದಲ್ಲಿ ತಿಳಿಸಿದರು. ಸಂಘದ ಕಾರ್ಯದರ್ಶಿ ಧನ್ಯವಾದ ಸಮರ್ಪಿಸಿದರು. ಸಂಘದ ಸದಸ್ಯರು ಉಪಸ್ಥಿತರಿದ್ದರು. ಜಾಗೃತಿ ಪತ್ರವನ್ನು ಉಡುಪಿಯ ಎಲ್ಲಾ ಔಷಧಿ ಅಂಗಡಿಗಳಿಗೆ ವಿತರಿಸಲಾಯಿತು.

RELATED ARTICLES
- Advertisment -
Google search engine

Most Popular