ಕಲೆ, ಸಾಹಿತ್ಯ, ಸಂಸ್ಕೃತಿಗಳು ನಮ್ಮ ಬದುಕನ್ನು ಹಸನುಗೊಳಿಸುವುದರ ಮೂಲಕ ಆದರ್ಶಪ್ರಾಯರನ್ನಾಗಿ ಮಾಡುತ್ತವೆ.ಕಲಾವಿದರು ಈ ನಾಡಿನ ಸಾಂಸ್ಕೃತಿಕ ಸಂಪತ್ತು, ಆದರೆ ಅವರ ಜೀವನ ನೋವಿನಿಂದ ಕೂಡಿರುತ್ತದೆ. ಅನೇಕ ಸಮಸ್ಯೆಗಳನ್ನು ಅನುಭವಿಸುತ್ತ ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ ಎಂದು ರಂಗಕರ್ಮಿಎನ್.ಎಸ್. ರಾಜು ಅವರು ಕಳವಳ ವ್ಯಕ್ತಪಡಿಸಿದರು. ಶ್ರೀ ಬಸವೇಶ್ವರ ಭಜನಾ ಸಂಘ ಬಿಳಿಚೋಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಾವಣಗೆರೆ ಇವರ ಸಹಯೋಗದಲ್ಲಿ , ಬಿಳಿಚೋಡುನ ಶ್ರೀ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ನಡೆದ, ಬಸವ ಕೇಂದ್ರದ ಮಾಸಿಕ ಕಾರ್ಯಕ್ರಮದ ಅಂಗವಾಗಿ ಶ್ರಾವಣ ಸಂಜೆ ಜಾನಪದ ಸಂಗೀತ ಕಾರ್ಯಕ್ರಮದ ಉದ್ಘಾಟನೆಯನ್ನು, ಹಾರ್ಮೋನಿಯಂ ನುಡಿಸುವುದರ ಮೂಲಕ ನೆರವೇರಿಸಿ ಮಾತನಾಡುತ್ತ, ಕಲಾವಿದರು ವೇದಿಕೆ ಮೇಲೆ ರಾಜಾ, ಮಂತ್ರಿ, ಸೇವಕ, ದೇವಾನುದೇವತೆಗಳ ಪಾತ್ರ ಮಾಡುತ್ತಾ ಜನರನ್ನು ರಂಜಿಸುತ್ತಾರೆ, ಆದರೆ ಅವರ ವೈಯುಕ್ತಿಕ ಬದುಕು ಆರ್ಥಿಕ ಸಂಕಷ್ಟಕ್ಕೊಳಲಾಗಿರುತ್ತದೆ, ಕಲಾವಿದರಿಗೆ ರಾಜ್ಯ ಸರ್ಕಾರ ನೀಡುವ ಎರಡು ಸಾವಿರ ರೂ. ಮಾಶಾಸನ ಅತ್ಯಲ್ಪವಾಗಿದ್ದು, ಅದನ್ನು ಕನಿಷ್ಠ 5000 ಕ್ಕೆ ಏರಿಸಲು ನಿರ್ಧಾರ ಕೈಗೊಳ್ಳಬೇಕೆಂದು ಅವರು
ಒತ್ತಾಯಿಸಿದರು.
ಜಗಳೂರಿನ ಶರಣ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಬಿ. ಎಂ. ವಿಶ್ವೇಶ್ವರಯ್ಯ ಅವರು ಮಾತನಾಡಿ ಪ್ರತಿ ತಿಂಗಳು ಈ ಗ್ರಾಮದಲ್ಲಿಬಸವ ಚಿಂತನೆ ಮಾಡಿಕೊಂಡು ಬರುತ್ತಿರುವುದು ಸಂತೋಷದಸಂಗತಿ, ಇದೇ ರೀತಿ ಗ್ರಾಮೀಣ ಭಾಗದಲ್ಲೂ ನಡೆಸಿದರೆ ಜನರ ಬದುಕು ಸುಧಾರಣೆಗೆ ಸಹಕಾರಿಯಾಗಲಿದೆ, ಎಂದು ತಿಳಿಸುತ್ತ ಬಸವಾದಿ ಶರಣರ
ವಿಚಾರಧಾರೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಕುರುಬ ಸಮಾಜದ
ಗುರುಗಳಾದ ಶ್ರೀ ಸಿದ್ದಯ್ಯ ಒಡೆಯರ್ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ನೀಲನಾಯ್ಕ, ಸಮಾಜ ಸೇವಕರಾದ ಸುಧೀರ್ ಕುಮಾರ್, ಮಾರ್ತಾಂಡಪ್ಪ, ಶಿವಾಜಿರಾವ್, ಕರೇಗೌಡ್ರು ಮಂಜುನಾಥ್ ಇದ್ದರು. ಕಾರ್ಯಕ್ರಮವನ್ನು ಪಿ. ನಾಗೇಂದ್ರಪ್ಪ ನಿರೂಪಿಸಿ, ಪಿ.ಜಿ. ಪರಮೇಶ್ವರಪ್ಪ ಸ್ವಾಗತಿಸಿ, ವಂದಿಸಿದರು, ಶ್ರೀ ಬಸವೇಶ್ವರ ಭಜನಾ ಸಂಘದ ಕಲಾವಿದರು ಜಾನಪದ ಸಂಗೀತ ನಡೆಸಿಕೊಟ್ಟರು.