ತಿರುವನಂತಪುರ: ಕುಟ್ಟಿಯಾಡಿ ಎಂಬಲ್ಲಿ ವಾಹನದೊಂದಿಗೆ ಎಂಟು ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿರುವ ಘಟನೆ ನಡೆದಿದೆ.
ಅಡಕ್ಕಟ್ಟು ನಿವಾಸಿ ವಿಜೀತ್ ಬಂಧಿತ ಆರೋಪಿಯಾಗಿದ್ದಾನೆ. ಕಾರಿನಲ್ಲಿ ಮಲಗಿದ್ದ ಮನ್ಸೂರ್ ಅವರ ಮಗಳು ಜಲ್ಸಾಳನ್ನು ಬಿಟ್ಟು ಅಂಗಡಿಗೆ ತೆರಳಿದ್ದರು. ಈ ವೇಳೆ ಆರೋಪಿ ವಿಜೀತ್ ಕಾರಿನೊಂದಿಗೆ ಬಾಲಕಿಯನ್ನು ಅಪಹರಿಸಿದ್ದಾನೆ. ಈ ವೇಳೆ ಮನ್ಸೂರ ಸ್ನೇಹಿತನ ವಾಹನದಲ್ಲಿ ಕಾರನ್ನು ಹಿಂಬಾಲಿ ಮಗುವನ್ನು ರಕ್ಷಿಸಿದ್ದಾರೆ.
ಬಾಲಕಿಯನ್ನು ಅಪಹರಿಸಲು ಯತ್ನಿಸಿರುವ ಮತ್ತು ಕಳವು ಮಾಡಿದ ಆರೋಪದ ಮೇಲೆ ಕುಟ್ಟಿಯಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಪೋಷಕರ ಹೇಳಿಕೆಯನ್ನು ದಾಖಲಿಸಿದ್ದಾರೆ.