ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲೆ, ವಂಜಾರಕಟ್ಟೆ, ಬೋಳ, ಕಾರ್ಕಳ ಮತ್ತು ಜೈ ತುಲುನಾಡು (ರಿ.) ಇದರ ವತಿಯಿಂದ ಅ.19ರಂದು ಬಲೆ ತುಲು ಲಿಪಿ ಕಲ್ಪುಗ ಕಾರ್ಯಾಗಾರದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಕಾರ್ಕಳ ಬೋಳ ಬಳಿಯ ವಂಜಾರಕಟ್ಟೆಯ ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಅಕ್ಷಯ್ ಅಡ್ಯಂತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಂತಿನಿಕೇತನ ಚಾರಿಟೇಬಲ್ ಫೌಂಡೇಶನ್ ಟ್ರಸ್ಟ್ನ ಅಧ್ಯಕ್ಷ ಮತ್ತು ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕ ಅಶೋಕ್ ಅಡ್ಯಂತಾಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲೆಯ ಗೌರವ ಸಲಹೆಗಾರ ಜಗದೀಶ್ ಆಚಾರ್, ಜೈ ತುಲುನಾಡು ಅಧ್ಯಕ್ಷ ಉದಯ ಪೂಂಜಾ ತಾರಿಪಾಡಿಗುತ್ತು. ಜೈ ತುಲುನಾಡು ಸ್ಥಾಪಕ ಸಮಿತಿ ಸದಸ್ಯರು ಕಿರಣ್ ತುಲುವೆ ಮುಖ್ಯ ಅತಿಥಿಗಳಾಗಿರಲಿದ್ದಾರೆ.