ಮುಲ್ಕಿ : ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ಮುಲ್ಕಿ ಸಮೀಪದ ಬಳ್ಕುಂಜೆ – ಫಲಿಮಾರ್ ಸಂಪರ್ಕ ಸೇತುವೆ ಕುಸಿತದ ಭೀತಿಯ ಬಗ್ಗೆ ಜಿಲ್ಲಾಡಳಿತ ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧ ಮಾಡಿದೆ. ಸೇತುವೆಯಲ್ಲಿ ಘನ ವಾಹನಗಳು ಚಲಿಸದಂತೆ ಕಬ್ಬಿಣದ ಭೀಮ್ ಗಳನ್ನು ಅಳವಡಿಸಲಾಗಿದ್ದು ಎಚ್ಚರಿಕೆಯ ಸೂಚನಾ ಫಲಕಗಳು ಹಾಗೂ ಬ್ಯಾರಿಕೇಡ್ ಇರಿಸಲಾಗಿದೆ. ಅಪಾಯದಲ್ಲಿರುವ ಸೇತುವೆ ಬಗ್ಗೆ ತುಳು ನಾಡು ಪತ್ರಿಕೆ ವರದಿ ಗೆ ಸಹಿತ ಅನೇಕ ಮಾಧ್ಯಮಗಳಲ್ಲಿ ಬಂದ ಹಿನ್ನೆಲೆಯಲ್ಲಿ ಸ್ಥಳೀಯರ ದೂರಿನಂತೆ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು ಈ ಸಂದರ್ಭದಲ್ಲಿ.ಬಳ್ಕುಂಜೆ ಪಂಚಾಯತ್ ಅಧ್ಯಕ್ಷೆ ಮಮತಾ ಪೂಂಜ, ಉಪಾಧ್ಯಕ್ಷ ನವೀನ್ ಶೆಟ್ಟಿ, ಸದಸ್ಯರಾದ ದಿನೇಶ್ ಪುತ್ರನ್, ಆನಂದ ಕೊಲ್ಲೂರು, ಗೀತಾ, ವಾಸು, ಜಯಲಕ್ಷೀ ಕರುಣಾಕರ್, ಭುವನಾಭಿರಾಮ ಉಡುಪ, ಪ್ರಭಾಕರ ಶೆಟ್ಟಿ, ದಿವಾಕರ ಪೂಂಜ, ಮುಕೆಶ್ ಅಮೀನ್, ದಿನೇಶ್ ದೇವಾಡಿಗ, ಅಮರ್ ಸನೀಲ್, ರಾಮಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.