ಮೂಡುಬಿದಿರೆ: ಇತ್ತೀಚೆಗೆ ಬನ್ನಡ್ಕ ರಾಷ್ಟಿಯ ಹೆದ್ದಾರಿ ಬಳಿ ಅಪಘಾತ ಸಂಭವಿಸಿದ್ದು ಒರ್ವ ವಿದ್ಯಾರ್ಥಿ ಮೃತಪಟ್ಟಿದ್ದರು. ಇದೀಗ ಅದೇ ರಸ್ತೆಯ ಅಣತಿ ದೂರದಲ್ಲಿ ಸೋಮವಾರ ಸಂಜೆ 2 ಸ್ಕೂಟರ್ ಗಳ ಮದ್ಯೆ ಅಪಘಾತ ಸಂಭವಿಸಿದ್ದು, ಸ್ಥಳೀಯ ವ್ಯಕ್ತಿ ಮೃತಪಟ್ಟಿದ್ದಾರೆ, ಹಾಗೂ ಇನ್ನೊಂದು ವಾಹನದಲ್ಲಿ ಸಂದೀಪ್ ನಾಯಕ್ ಮತ್ತು ಅವರ ದೊಡ್ಡಮ್ಮ ಬೇಬಿ ನಾಯ್ಕ್ ಸಂಚರಿಸುತ್ತಿದ್ದು, ಸಂದೀಪ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮಹಿಳೆಗೆ ಗಂಭೀರ ಗಾಯಗಳಾಗಿದೆ.
ಮೃತ ವ್ಯಕ್ತಿ ಅದೇ ಊರಿನ ಅಬ್ದುಲ್ ಘನಿ. ಇವರು ರಸ್ತೆಯ ಬದಿಯಲ್ಲಿ ಒಂದು ಅಂಗಡಿಯನ್ನು ನಡೆಸುತ್ತಿದ್ದಾರೆ. ತನ್ನ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಂಡು ಬಂದು ಬಲ ಬದಿಯ ರಸ್ತೆಗೆ ತಿರುಗುವ ಸಂದರ್ಭದಲ್ಲಿ ಕಾರ್ಕಳ ಕಡೆಯಿಂದ ಬರುತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಕಾರ್ಕಳ ಕಡೆಯಿಂದ ಬರುತ್ತಿದ್ದ ಅಪಘಾತವಾದಾಗ ಅಬ್ದುಲ್ ಘನಿ ಅವರ ಕಾಲಿಗೆ ಪೆಟ್ಟಾಗಿದ್ದು, ಮಾತಾನಾಡುತ್ತಿದ್ದರು ನಂತರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಹಿಳೆಯ ಸ್ಥಿತಿಯು ಗಂಭೀರವಾಗಿದ್ದು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.