ಮುಲ್ಕಿ : ಬಪ್ಪನಾಡು ತನ್ನ ದ್ವಿತೀಯ ವರ್ಷದ ಸೇವಾ ಕಾರ್ಯಕ್ರಮ ಲೈವ್ ಜಿಲ್ಲೆಗೆ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಗೆ ದೇಣಿಗೆ ನೀಡಿ ಸತತ ದ್ವಿತೀಯ ಬಾರಿಗೆ ಬಪ್ಪನಾಡು ಇನ್ಸ್ ಫಯರ್ ಲಯನ್ಸ್ ಕ್ಲಬ್ ಗೆ 2023-24 ನೇ ಸಾಲಿನ ಲಯನ್ಸ್ ಜಿಲ್ಲಾ ಪ್ರಥಮ ಪ್ರಶಸ್ತಿ ಘೋಷಣೆಯಾಗಿದೆ.
‘ಸೇವೆ’ ಮತ್ತು ‘ಸಾಂಗತ್ಯ’ ಪರಿಕಲ್ಪನೆಯಲ್ಲಿ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಲಯನ್ಸ್ ಕ್ಲಬ್ ಪ್ರಶಸ್ತಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾಗಿದೆ.
4 ಕಂದಾಯ ಜಿಲ್ಲೆಗಳಾದ ದ.ಕ, ಕೊಡಗು,ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲೆಯಲ್ಲಿ ಒಟ್ಟು 128 ಕ್ಲಬ್ಬುಗಳಿದ್ದು ಈ ಪೈಕಿ ಆಡಳಿತ ಮತ್ತು ಸೇವಾ ವಿಭಾಗದಲ್ಲಿ ಮುಂಚೂಣಿ ಕಾಯ್ದುಕೊಂಡು ಬಂದಿದ್ದ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಜೂನ್ ಕೊನೆಯ ವೇಳೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿತು.
ಲಯನ್ ಎನ್ ಸುಧೀರ್ ಬಾಳಿಗ ಅಧ್ಯಕ್ಷರಾಗಿ, ಲಯನ್ ಪುಷ್ಪರಾಜ್ ಚೌಟ ಕಾರ್ಯದರ್ಶಿಯಾಗಿ ಮತ್ತು ಲಯನ್ ಬಿ ಶಿವಪ್ರಸಾದ್ ಕೋಶಾಧಿಕಾರಿಯಾಗಿ ನಾಯಕತ್ವ ನೀಡುತ್ತಿರುವ ಲಯನ್ಸ್ ಕ್ಲಬ್ 2023-24 ನೇ ಸಾಲಿನಲ್ಲಿ, ಅರ್ಹ 2 ಕುಟುಂಬಗಳಿಗೆ ಮನೆ ನಿರ್ಮಾಣ, ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಅನಾರೋಗ್ಯ ಪೀಡಿತರಿಗೆ ಧನಸಹಾಯ, ಸರಕಾರಿ ಶಾಲೆಗಳಿಗೆ ಪುಸ್ತಕ, ಪೀಠೋಪಕರಣ ಮತ್ತು ಕುಡಿಯುವ ನೀರಿನ ಘಟಕ, ವೃದ್ದಾಶ್ರಮಕ್ಕೆ ಆಹಾರ ವಸ್ತುಗಳ ಕೊಡುಗೆ, 500ಕ್ಕೂ ಅಧಿಕ ಯೂನಿಟ್ ರಕ್ತಸಂಗ್ರಹ ಅಂತರರಾಷ್ಟ್ರೀಯ ಹಾಗೂ ಜಿಲ್ಲಾ ಗವರ್ನರ್ ರವರ 35ಕ್ಕೂ ಅಧಿಕ ಎಲ್ಲಾ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಿಸಿದೆ. ಅಲ್ಲದೆ ಆರು ಜನ ಸದಸ್ಯರು ಎಂಜೆಎಫ್ ಮೂಲಕ ಅಂತಾರಾಷ್ಟ್ರೀಯ ಫಂಡ್ (ಎಲ್.ಸಿ.ಐ.ಎಫ್) ಗೆ ಸುಮಾರು 5 ಲಕ್ಷ ದಷ್ಟು ಕೊಡುಗೆ ನೀಡಿರುವುದನ್ನು ಜಿಲ್ಲೆ ಗಣನೀಯವಾಗಿ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆಗೊಳಿಸಿದೆ.
ಲಯನ್ಸ್ ಕ್ಲಬ್ 2022-23 ನೇ ಸಾಲಿನಲ್ಲಿ ಸ್ಥಾಪಕ ಅಧ್ಯಕ್ಷರಾದ ಲಯನ್ ವೆಂಕಟೇಶ ಹೆಬ್ಬಾರ್ ಅವರು ಅಧ್ಯಕ್ಷರಾಗಿದ್ದಾಗ ಪ್ರಥಮ ಬಾರಿ ಜಿಲ್ಲಾ ಪ್ರಥಮ ಪ್ರಶಸ್ತಿ ಲಭಿಸಿತ್ತು. ಇದೀಗ ಎರಡನೇ ಬಾರಿಗೆ ಲಯನ್ ಸುಧೀರ್ ಬಾಳಿಗ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಶಸ್ತಿ ಬಂದಿರುವುದು ಅವಿಸ್ಮರಣೀಯ ದಾಖಲೆಯಾಗಿದೆ. ಈ ಪ್ರಶಸ್ತಿಗೆ ಉಭಯ ಜಿಲ್ಲೆಗಳಿಂದ ಪ್ರೋತ್ಸಾಹದ ಸುರಿಮಳೆಯೇ ಬಂದಿದೆ.