ಬಂಟ್ವಾಳ:ಕೇಂದ್ರದ ಕಾಮರ್ಿಕ ವಿರೋಧಿ ನೀತಿಯಿಂದ ದೇಶದ ಬಡ ಕಾಮರ್ಿಕರಿಗೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಹೋರಾಟದ ಮೂಲಕ ಎದುರಿಸುವ ನಿಟ್ಟಿನಲ್ಲಿ ಅಖಿಲ ಭಾರತ ಕಾಮರ್ಿಕ ಸಂಘಟನೆಗಳ ಕೇಂದ್ರೀಯ ಸಮಿತಿ (ಎಐಸಿಸಿಟಿಯು ) ವತಿಯಿಂದ ಇದೇ 24 ಮತ್ತು 25ರಂದು ಬಿ.ಸಿ.ರೋಡು ಅಂಬೇಡ್ಕರ್ ಭವನದಲ್ಲಿ ‘ರಾಜ್ಯ ಸಮ್ಮೇಳನ’ ನಡೆಯಲಿದೆ ಎಂದು ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದಶರ್ಿ ಪಿ.ಪಿ.ಅಪ್ಪಣ್ಣ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ರಾಜ್ಯದಲ್ಲಿ ಕಾಮರ್ಿಕ ವರ್ಗವನ್ನು ಅಸಂಘಟಿತ ವಲಯಕ್ಕೆ ಸೇರಿಸುವ ತಂತ್ರಗಾರಿಕೆ ನಡೆಯುತ್ತಿದೆ. ಉದ್ಯೋಗ ಅರಸಿಕೊಂಡು ಬರುತ್ತಿರುವ ಕಾಮರ್ಿಕರೆಲ್ಲರೂ ಅಸಂಘಟಿತ ವಲಯದಲ್ಲಿ ಗುರುತಿಸಿ, ಇವರಿಗೆ ಸ್ಥಿರವಾದ ವೇತನ, ಉದ್ಯೋಗ ಭದ್ರತೆ, ಮತ್ತು ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ. ಈ ನಡುವೆ ಲಿಂಗ ಮತ್ತು ಜಾತಿ ತಾರತಮ್ಯ, ಪಿತೃಪ್ರಭುತ್ವ ಮತ್ತು ಅಸಮಾನತೆಗಳು, ಸಮಾನ ವೇತನ ನಿರಾಕರಣೆ ನಡೆಯುತ್ತಿದೆ’ ಎಂದರು.
ಇದೇ 24ರಂದು ಬೆಳಿಗ್ಗೆ 10 ಗಂಟೆಗೆ ಬಿ.ಸಿ.ರೋಡ್ ಕೈಕಂಬದಿಂದ ‘ಶ್ರಮಜೀವಿಗಳ ಅಧಿಕಾರದತ್ತ’ ಜಾಥಾ ನಡೆಯಲಿದ್ದು, ಎರಡೂ ದಿನಗಳ ಸಮ್ಮೇಳನದಲ್ಲಿ ವಿವಿಧೆಡೆಯಿಂದ ಸಾವಿರಕ್ಕೂ ಮಿಕ್ಕಿ ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳುವರು. ಈ ಸಮ್ಮೇಳನಕ್ಕೆ ರಾಷ್ಟೀಯ ಕಾರ್ಯದಶರ್ಿ ರಾಜೀವ್ ದಿಮ್ರಿ , ರಾಷ್ಟ್ರೀಯ ಅಧ್ಯಕ್ಷ ಶಂಕರ್ ಮತ್ತಿತರ ಮುಖಂಡರು ಭಾಗವಹಿಸುವರು. ಜಾಥಾ ಮತ್ತು ಬಹಿರಂಗ ಸಭೆಗಳಲ್ಲಿ ವಿವಿಧ ಕಾಮರ್ಿಕ ಸಂಘಟನೆಗಳು, ರೈತ, ದಲಿತ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಎಐಸಿಸಿಟಿಯು ಸದಸ್ಯರಾದ ಪೌರಕಾಮರ್ಿಕರು, ಬೀದಿ ವ್ಯಾಪಾರಿಗಳು, ಆಸ್ಪತ್ರೆ ಕಾಮರ್ಿಕರು, ಬಿಸಿ ಊಟ ಕಾಮರ್ಿಕರು, ಆಟೋ ಚಾಲಕರು, ಬೀಡಿ ಕಾಮರ್ಿಕರು, ಎನ್.ಎ.ಎಲ್, ಡಿ ಆರ್ ಡಿ ಒ, ಐಟಿಐನಂಥ ಕೇಂದ್ರ ಸಕರ್ಾರದ ಸಂಸ್ಥೆಗಳಲ್ಲಿ ನೆಪಮಾತ್ರ ಗುತ್ತಿಗೆ ಪದ್ಧತಿಯಡಿ ದುಡಿಯುತ್ತಿರುವ ಕಾಮರ್ಿಕರು, ಫ್ಯಾಕ್ಟರಿ ಕಾಮರ್ಿಕರು ಮತ್ತಿತರರು ಪಾಲ್ಗೊಳ್ಳುವರು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ನಾಗರಾಜ್ ಪೂಜಾರ್, ವಕೀಲ ಮೈತ್ರೇಯಿ ಕೃಷ್ಣನ್, ಸಂಘಟನೆ ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ, ಕಾರ್ಯದಶರ್ಿ ಕೆ.ಇ ಮೋಹನ್, ವಕೀಲ ತುಳಸೀದಾಸ್ ವಿಟ್ಲ ಇದ್ದರು.