ಬೆಳ್ತಂಗಡಿ:(ಮಾ.13) ಗೇರುಕಟ್ಟೆ ಸಮೀಪದ ಖಾಸಗಿ ವ್ಯಕ್ತಿಯೊಬ್ಬರ ಗೇರುತೋಟದಲ್ಲಿ ನೇಣುಬಿಗಿದುಕೊಂಡು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಕಲ್ಲೇರಿ ಶಿವಗಿರಿ ಸಮೀಪದ ರವಿ ಯಾನೆ ವಾಸುದೇವ ನಾಯ್ಕ (44 ವರ್ಷ) ಮೃತ ವ್ಯಕ್ತಿ. ಬೆಳ್ತಂಗಡಿ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.