ಮಂಗಳೂರು :ಗಾಣಿಗರ ಯಾನೆ ಸಫಲಿಗರ ಸಮಾಜ ಸುಧಾರಣಾ ಸಮಿತಿ ಉಳಿಯ, ಉಳ್ಳಾಲ, ಇದರ ಸದಸ್ಯರು ತಾಲೂಕು ಗಾಣಿಗ ಸೇವಾ ಸಂಘ ಬೆಳ್ತಂಗಡಿ, ಉಪ್ಪಿನಂಗಡಿ, ಮಂಜೇಶ್ವರ ಮತ್ತು ತೊಕ್ಕೊಟ್ಟು ಈ ಎಲ್ಲಾ ಭಾಗದ ನಮ್ಮ ಗಾಣಿಗ ಸಮಾಜ ಬಾಂಧವರು ಸರಿ ಸುಮಾರು 700 ರಿಂದ 800 ಸಂಖ್ಯೆಯಲ್ಲಿ ಶ್ರೀಮಠಕ್ಕೆ ಭೇಟಿಕೊಟ್ಟು ಸುಮಾರು ಹತ್ತರಿಂದ ಹದಿನೈದು ಜನರ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನೆರವೇರಿಸಿದರು.

ಜೊತೆಗೆ ಶ್ರೀ ವೇಣುಗೋಪಾಲಕೃಷ್ಣನಿಗೆ ಚಂಡೆ ಸೇವೆಯನ್ನು ಸಲ್ಲಿಸಿ, ನಂತರ ನಡೆದ ಮಹಾಪೂಜೆಗೆ ಎಲ್ಲಾ ಸದ್ಭಕ್ತರು ಸಾಕ್ಷಿಯಾದರು. ತದನಂತರದಲ್ಲಿ ತೀರ್ಥ ಪ್ರಸಾದ ವಿತರಣೆ ನಡೆಯಿತು. ಆಗಮಿಸಿದ ಎಲ್ಲಾ ಪದಾಧಿಕಾರಿಗಳನ್ನು ಸಂಘದ ಅಧ್ಯಕ್ಷರಾದ ಸತೀಶ್ ಗಾಣಿಗ ಇವರು ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಹಾಜರಿದ್ದ ಸಂಘದ ಅಧ್ಯಕ್ಷರನ್ನು ಪ್ರಧಾನ ಕಾರ್ಯದರ್ಶಿಯವರನ್ನು ಹಾಗೂ ಕೋಶಾಧಿಕಾರಿಯವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ನಾರಾಯಣ ಗಾಣಿಗ ಕುಂದಾಪುರ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಗಾಣಿಗ, ಕೋಶಾಧಿಕಾರಿ ಎಚ್ಎಸ್ ಗಾಣಿಗ ,ಭಾಸ್ಕರ್ ಗಾಣಿಗ ತಲ್ಲೂರು, ನಾಗರಾಜ್ ಗಾಣಿಗ ಬಳ್ಕೂರು , ಕೆ. ನರಸಿಂಹ ಗಾಣಿಗ ಅಂಕದ ಕಟ್ಟೆ ಮತ್ತು ಭಾಸ್ಕರ್ ಗಾಣಿಗ ಹೊಸಂಗಡಿ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.