Wednesday, February 19, 2025
Homeರಾಷ್ಟ್ರೀಯರೈಲ್ವೆ ಹಳಿ ಮೇಲೆ ಗ್ಯಾಸ್‌ ಸಿಲಿಂಡರ್‌ ಇಟ್ಟು ಕಾಳಿಂದಿ ಎಕ್ಸ್‌ಪ್ರೆಸ್ ಸ್ಫೋಟಕ್ಕೆ ಯತ್ನ | ತಪ್ಪಿದ...

ರೈಲ್ವೆ ಹಳಿ ಮೇಲೆ ಗ್ಯಾಸ್‌ ಸಿಲಿಂಡರ್‌ ಇಟ್ಟು ಕಾಳಿಂದಿ ಎಕ್ಸ್‌ಪ್ರೆಸ್ ಸ್ಫೋಟಕ್ಕೆ ಯತ್ನ | ತಪ್ಪಿದ ಭಾರೀ ಅನಾಹುತ

ಲಕ್ನೋ: ರೈಲ್ವೆ ಹಳಿ ಮೇಲೆ ಸಿಲಿಂಡರ್‌ ಇಟ್ಟು ಸ್ಫೋಟಿಸಲು ಯತ್ನಿಸಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಉತ್ತರ ಪ್ರದೇಶದ ಅನ್ವರ್‌ಗಂಜ್-ಕಾಸ್‌ಗಂಜ್ ರೈಲು ಮಾರ್ಗದ ಕಾಳಿಂದಿ ಎಕ್ಸ್​ಪ್ರೆಸ್​ ರೈಲು ರಾತ್ರಿ 8:30ರ ಸುಮಾರಿಗೆ ತೆರಳುತ್ತಿತ್ತು. ಈ ವೇಳೆ ಬರ್ರಾಜ್‌ಪುರ ಹಾಗೂ ಬಿಲ್ಹೌರ್ ನಡುವಿನ ರೈಲ್ವೆ ಟ್ರ್ಯಾಕ್ ಮೇಲೆ ತುಂಬಿರುವ ಎಲ್‌ಪಿಜಿ ಸಿಲಿಂಡರ್‌ಗೆ ರೈಲು ಡಿಕ್ಕಿ ಹೊಡೆದಿದೆ. ತಕ್ಷಣ ಭಾರೀ ಶಬ್ಧ ಬಂದ ಕಾರಣ ಲೊಕೊ ಪೈಲಟ್ ಟ್ರೈನ್ ನಿಲ್ಲಿಸಿ ಸುತ್ತ ಪರಿಶೀಲನೆ ಮಾಡಿದ್ದಾರೆ. ಅನ್ವರ್ಗಂಜ್ ನಿಲ್ದಾಣದ ರೈಲ್ವೆ ಸೂಪರಿಂಟೆಂಡೆಂಟ್, ಆರ್‌ಪಿಎಫ್ ಮತ್ತು ಇತರ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಕೆಲವು ಅನುಮಾನಸ್ಪದ ವಸ್ತುಗಳು ಕಂಡು ಬಂದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿದಾಗ ಪೊದೆಗಳಲ್ಲಿ ಸಿಲಿಂಡರ್, ಪೆಟ್ರೋಲ್ ಬಾಟಲ್, ಬೆಂಕಿಕಡ್ಡಿ, ಗನ್ ಪೌಡರ್ ಸೇರಿದಂತೆ ಹಲವು ಮಾರಕ ವಸ್ತುಗಳು ಪತ್ತೆಯಾಗಿವೆ. ಅರ್ಧ ಗಂಟೆ ನಿಲ್ಲಿಸಿದ ನಂತರ ರೈಲು ಮತ್ತೆ ತೆರಳಿದೆ. ಸದ್ಯ ಸ್ಥಳದಲ್ಲಿ ಸಿಕ್ಕ ಎಲ್ಲ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸರ ಜೊತೆ ವಿಧಿವಿಜ್ಞಾನ ತಂಡ ಕೈಜೋಡಿಸಿದೆ. ಇನ್ನು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕೂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ.
ಈ ಎಲ್ಲವನ್ನೂ ಗಮನಿಸಿದರೆ ದೊಡ್ಡ ಮಟ್ಟದಲ್ಲೇ ಸ್ಫೋಟದ ಸಂಚು ರೂಪಿಸಿದ್ದರು ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಹೀಗಾಗಿ ಪ್ರಕರಣವನ್ನು ಪೊಲೀಸರು ಸೇರಿದಂತೆ ತನಿಖಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿವೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular