Monday, May 12, 2025
Homeರಾಜ್ಯಕಲಾಕುಂಚ ಅಜೀವ ಸದಸ್ಯತ್ವಕ್ಕೆ ಅಭಿಯಾನ

ಕಲಾಕುಂಚ ಅಜೀವ ಸದಸ್ಯತ್ವಕ್ಕೆ ಅಭಿಯಾನ

ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕಳೆದ ಮೂರುವರೆ ದಶಕಗಳಿಂದ ನಿರಂತರವಾಗಿ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಯಕ್ಷಗಾನ ಸೇರಿದಂತೆ ವಿವಿಧ ಲಲಿತ ಕಲಾ ಪ್ರಕಾರಗಳ ಚಟುವಟಿಕೆಗಳೊಂದಿಗೆ ಅವಕಾಶ ವಂಚಿತ ಮಕ್ಕಳಿಗೆ, ಮಹಿಳೆಯರಿಗೆ ಸೂಕ್ತ ಮುಕ್ತವಾದ ವೇದಿಕೆ ಕಲ್ಪಿಸುವ ಅವರಲ್ಲಿ ಹುದುಗಿರುವ ವಿವಿಧ ಪ್ರತಿಭೆಗಳನ್ನು ಅನಾವರಣ ಗೊಳಿಸುವ ಸದುದ್ದೇಶದಿಂದ ಕೇರಳ ರಾಜ್ಯ
ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಶಾಖೆಗಳು ಹುಟ್ಟು ಹಾಕಿದ್ದು ಸಾಹಿತ್ಯ ಕಲಾ ಪ್ರಕಾರಗಳಲ್ಲಿ ಆಸಕ್ತರು ಈ ಸಂಸ್ಥೆಗೆ ಆಜೀವ ಸದಸ್ಯರಾಗಬಹುದು ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ. ಕೊರೋನದ ಸಂದರ್ಭದಲ್ಲೂ ಯಾವುದೇ ಕಾರ್ಯಕ್ರಮ ನಿಲ್ಲಿಸದೇ ಅಂತರ್ಜಾಲ ತಾಣದಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಈಗಾಗಲೇ ಕಾವ್ಯಕುಂಚ ಕವನ
ಸಂಕಲನ ಮೂರು ಭಾಗ ಮುದ್ರಿಸಿ ಅನಾವರಣಗೊಳಿಸಿದ್ದು ಆಯಿತು. ಈಗ ಕಾವ್ಯಕುಂಚ ನಾಲ್ಕನೇ ಭಾಗದ ಮುದ್ರಣಕ್ಕೆ ಪೂರ್ಣ ಪ್ರಮಾಣದಲ್ಲಿ ಸಿದ್ಧತೆಯಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ವಿವಿಧ ಸಾಹಿತ್ಯ, ಸಂಗೀತ ದಿಗ್ಗಜರನ್ನು ಕರೆಸಿದ ಈ ಸಂಸ್ಥೆಗೆ ಸದಸ್ಯರಾಗುವವರು 9538732777 ಈ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular