Saturday, May 24, 2025
Homeಅಪಘಾತಕಾರು-ಲಾರಿ ಡಿಕ್ಕಿ: ಆರು ಮಂದಿ ಬ್ಯಾಂಕ್ ಸಿಬ್ಬಂದಿ ಗಂಭೀರ

ಕಾರು-ಲಾರಿ ಡಿಕ್ಕಿ: ಆರು ಮಂದಿ ಬ್ಯಾಂಕ್ ಸಿಬ್ಬಂದಿ ಗಂಭೀರ

ಕುಂದಾಪುರ: ಕಾರು ಮತ್ತು ಲಾರಿಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಆರು ಮಂದಿ ಎಸ್ ಬಿಐ ಉದ್ಯೋಗಿಗಳು ಗಂಭೀರ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರ ನಾಗೂರು ಸಮೀಪದ ಅರೆಹೊಳೆ ಬೈಪಾಸ್ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಚಿಕ್ಕಮಗಳೂರಿನ ಸುತ್ತಮುತ್ತಲಿನ ಎಸ್ ಬಿಐ ಶಾಖೆಗಳ ಸಿಬ್ಬಂದಿಗಳಾದ ಪ್ರತಾಪ್, ಪ್ರೇಮ್, ಪ್ರಜ್ವಲ್, ಅಂತೋನಿ, ಸುರೇಶ್ ವಿಘ್ನೇಶ್ ಅಪಘಾದಲ್ಲಿ ಗಾಯಗೊಂಡಿದ್ದಾರೆ. ಶನಿವಾರ ಸಂಜೆ ತಮ್ಮ ಸ್ನೇಹಿತನಾದ ವಿಘ್ನೇಶ್ ಮನೆಯಲ್ಲಿ ಉಳಿದುಕೊಂಡಿದ್ದ ಇವರು ಭಾನುವಾರ ಮಧ್ಯಾಹ್ನ ಗೋಕರ್ಣ ದೇವಸ್ಥಾನಕ್ಕೆ ಹೊರಟಿದ್ದರು. ಹೀಗೆ ದೇವಸ್ಥಾನಕ್ಕೆ ಹೋಗುವಾಗ ಅರೆಹೊಳೆ ಬೈಪಾಸ್ ಬಳಿ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಆರು ಮಂದಿಯಲ್ಲಿ ಐವರು ಗಂಭೀರ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular