Monday, March 17, 2025
Homeಮುಲ್ಕಿಮುಲ್ಕಿ ಬಿಲ್ಲವ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ದಿ. ವಿಠಲ್ ಕೆ ಅಮೀನ್ ರವರ ಶ್ರದ್ಧಾಂಜಲಿ...

ಮುಲ್ಕಿ ಬಿಲ್ಲವ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ದಿ. ವಿಠಲ್ ಕೆ ಅಮೀನ್ ರವರ ಶ್ರದ್ಧಾಂಜಲಿ ಸಭೆ

ಮುಲ್ಕಿ: ಮುಲ್ಕಿ ಬಿಲ್ಲವ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷರಾಗಿ ಕೊಡುಗೈ ದಾನಿಯಾಗಿ ದಿ. ವಿಠಲ ಅಮೀನ್ ರವರು ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಿ ಸಾರ್ಥಕ ಬದುಕು ಸಾಧಿಸಿದ್ದರು ಎಂದು ಹೊಸ ಅಂಗಣ ಮಾಸಪತ್ರಿಕೆಯ ಸಂಪಾದಕ ಜ್ಯೋತಿಷಿ ಡಾ.ಹರೀಶ್ಚಂದ್ರ ಪಿ ಸಾಲ್ಯಾನ್ ಹೇಳಿದರು ಅವರು ಮುಲ್ಕಿ ಶ್ರೀ ನಾರಾಯಣ ಗುರು ಸಮುದಾಯ ಭವನದ ರುಕ್ಕರಾಮ ಸಾಲ್ಯಾನ್ ಸಭಾಗೃಹದಲ್ಲಿ ಇತ್ತೀಚೆಗೆ ನಿಧನರಾದ ಮುಲ್ಕಿ ಬಿಲ್ಲವ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ದಿ. ವಿಠಲ್ ಕೆ ಅಮೀನ್ ರವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಅವರು ಮಾತನಾಡಿ ಅವರ ಆದರ್ಶಗಳನ್ನು ಯುವ ಜನಾಂಗ ಅನುಸರಿಸಬೇಕಾಗಿದೆ ಎಂದರು ಕಾರ್ನಾಡ್ ಹರಿಹರ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಎಚ್ ಅರವಿಂದ ಪೂಂಜಾ, ಮುಲ್ಕಿ ನಗರ ಪಂಚಾಯತ್ ಸದಸ್ಯರಾದ ಹರ್ಷರಾಜ ಶೆಟ್ಟಿ, ಸತೀಶ್ ಅಂಚನ್, ರಾಧಿಕಾ ಯಾದವ ಕೋಟ್ಯಾನ್, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ, ಮಾಜೀ ಅಧ್ಯಕ್ಷರಾದ ರಮೇಶ್ ಅಮೀನ್ ಕೊಕ್ಕರಕಲ್, ಗೋಪಿನಾಥ ಪಡಂಗ, ಮಹಿಳಾ ಮಂಡಳಿಯ ಸರೋಜಿನಿ ಸುವರ್ಣ, ರಂಗಕರ್ಮಿ ಚಂದ್ರಶೇಖರ ಸುವರ್ಣ, ಉದ್ಯಮಿ ವಾಸು ಪೂಜಾರಿ ಚಿತ್ರಾಪು, ಬಿರುವೆರ್ ಕುಡ್ಲ ಮುಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್, ಹೆಜ್ಮಾಡಿ ಬಿಲ್ಲವದ ಸಂಘದ ಅಧ್ಯಕ್ಷ ಮೋಹನ್ ದಾಸ್, ತಾರಾನಾಥ ಸುವರ್ಣ ಅಡ್ವೆ, ಉದಯಕುಮಾರ್ ಶೆಟ್ಟಿ ಅಧಿಧನ್, ಉಮೇಶ್ ಮಾನಂಪಾಡಿ
ಸಾಧು ಅಂಚನ್ ಮಟ್ಟು, ದಿ. ವಿಠಲ್ ಕೆ ಅಮೀನ್ ರವರ ತಮ್ಮ ಸುಂದರ ಪೂಜಾರಿ ಪಡುಬಿದ್ರೆ, ಪುತ್ರ ದೇವರಾಜ್ ಅಮೀನ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮೌನ ಪ್ರಾರ್ಥನೆ ಹಾಗೂ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸುವ ಮೂಲಕ ಮೂಲಕ ದಿ. ವಿಠಲ್ ಕೆ ಅಮೀನ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

RELATED ARTICLES
- Advertisment -
Google search engine

Most Popular