ಕಿನ್ನಿಗೋಳಿ : ನವೆಂಬರ್ 14 ರಂದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನದ ಪ್ರಯುಕ್ತ ಶಾಂತಿಪಲ್ಕೆಯ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಜವಾಹರ್ ಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸಂತೋಷ್ ಕುಮಾರ್, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಕಾವ್ಯಶ್ರೀ,ಹಿರಿಯ ನಾಗರಿಕರಾದ ಪ್ರೇಮಾ ಆಚಾರ್ಯ, ಮಣಿಪಾಲ ದಂತ ವೈದ್ಯಕೀಯ ಉಪನ್ಯಾಸಕಿ ನೀತಾ ಶೆಣೈ, ಅಂಗನವಾಡಿ ಕಾರ್ಯಕರ್ತೆ ಪ್ರೇಮಾ, ಆಶಾ ಕಾರ್ಯಕರ್ತೆ ಶರ್ಮಿಳಾ, ಸಹಾಯಕಿ ಪುಷ್ಪ, ಭವ್ಯಶ್ರೀ, ಸೌಮ್ಯ,ಪವಿತ್ರಾಂಜಲಿ, ಸುಶೀಲಾ, ಅಶ್ವಿನಿ,ದಯಾನಂದ, ಲಕ್ಷಣ್ ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಿನ್ನಿಗೋಳಿ : ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಆಚರಣೆ
RELATED ARTICLES