ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದಿಂದ ಅಂತರಾಷ್ಟಿಯ ಮಹಿಳಾ ದಿನಾಚರಣೆಯ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ “ದಾವಣಗೆರೆ ಗೃಹಿಣಿ ಸ್ಪರ್ಧೆ” ಏರ್ಪಡಿಸಿದ್ದು ಫಲಿತಾಂಶ ಈ ಕೆಳಕಂಡಂತೆ ಇದೇ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲೀಲಾ ಸುಭಾಷ್ ತಿಳಿಸಿದ್ದಾರೆ. ಪ್ರಥಮ ಬಹುಮಾನ ಕವಿತಾ ತಿಮ್ಮೇಶ್, ದ್ವಿತೀಯ ಬಹುಮಾನ ಇಂದಿರಾ ಸಿದ್ದೇಶ್, ತೃತಿಯ ಬಹುಮಾನ ಶ್ರೀಮತಿ ವಿಜಯಲಕ್ಷ್ಮೀ ರಮೇಶ್ ಸಾಳಂಕಿ ಪಡೆದಿರುತ್ತಾರೆ ಎಂದು ತೀರ್ಪುಗಾರರಲ್ಲಿ ಒಬ್ಬರಾದ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ಪ್ರಕಟಿಸಿದ್ದಾರೆ. ಮಾರ್ಚ್ 29, 31 ಎರಡು ದಿನಗಳ ಕಾಲ ಕಲಾಕುಂಚ ಕಛೇರಿ ಸಭಾಂಗಣ ಮತ್ತು ನಗರದ ಪ್ರವಾಸಿ ಮಂದಿರ ರಸ್ತೆಯಲ್ಲಿರುವ ರೋಟರಿ ಬಾಲ ಭವನದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಈ ಮಹತ್ವಪೂರ್ಣ ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ಶೆಣೈ, ಕಲಾಕುಂಚ ವಿವಿಧ ಬಡಾವಣೆಗಳ ಅಧ್ಯಕ್ಷರಾದ ಲಲಿತ ಕಲ್ಲೇಶ್, ಶಾರದಮ್ಮ ಶಿವನಪ್ಪ, ಪ್ರಭಾ ರವೀಂದ್ರ, ಶೈಲಾ ವಿನೋದ್, ಶೈಲಾ ವಿಜಯಕುಮಾರ್, ಮಂಜುಳಾ ಸುನೀಲ್, ಶಿಲ್ಪಾ ಉಮೇಶ್, ಗಿರಿಜಮ್ಮ ನಾಗರಾಜ್, ಪುಷ್ಪ ಮಂಜುನಾಥ್, ಲಕ್ಷ್ಮೀ ಸುರೇಶ್ ಮುಂತಾದವರು ಪಾರದರ್ಶಕವಾಗಿ ಪ್ರಮಾಣಿಕವಾಗಿ
ತೀರ್ಪು ನೀಡಿದರು ಎಂದು ಸಂಸ್ಥೆಯ ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ್ ಕೃತಜ್ಞತೆ ಸಲ್ಲಿಸಿ ಸ್ಪರ್ಧೆಯ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.