Monday, February 17, 2025
Homeಮಂಗಳೂರುದಯಾ ಕ್ರಿಯೇಷನ್ ಬಾಯಾರು ಇದರ 4ನೇ ವರ್ಷ ಸಂಭ್ರಮೋತ್ಸವ

ದಯಾ ಕ್ರಿಯೇಷನ್ ಬಾಯಾರು ಇದರ 4ನೇ ವರ್ಷ ಸಂಭ್ರಮೋತ್ಸವ

ದಯಾ ಕ್ರಿಯೇಷನ್ ಬಾಯಾರು ಇದರ 4ನೇ ವರ್ಷ ಸಂಭ್ರಮೋತ್ಸವದ ನಿನ್ನೆ ಇಡ್ಕಿದು ಸೇವಾ ಸಹಕಾರಿ ಸಂಘ ನಿ ಕುಳ ಕುಂಡಡ್ಕ ಶಾಖೆ ಕಲಶಾಮೃತ ಹಾಲ್ ನಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮದೊಂದಿಗೆ ಸಂಪನ್ನೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಧರ್ ಬಾಳೆಕಲ್ಲು ಇವರು ವಹಿಸಿದ್ದರು.

ಸಭೆಯಲ್ಲಿ ಶ್ವೇತಾ ಪೂಜಾರಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರು, ದಯಾನಂದ ಅಮೀನ್ ಬಾಯಾರು,ಮಹೇಶ್ ಕಾಮಜಾಲು,ಶೀಲಾವತಿ ವಿಟ್ಲ, ತೋಡಿಕಾನ ಅಬ್ದುಲ ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ತೋಡಿಕಾನ ಅಬ್ದುಲ ಇವರ ಸಾಹಿತ್ಯದ ಮೆರುಗನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು. ಹಾಗೂ ಕಳೆದ SSLC ಪರೀಕ್ಷೆಯಲ್ಲಿ ಅತ್ಯಧಿ ಅಂಕ ಗಳಿಸಿದ್ದು ಅಲ್ಲದೆ ಉತ್ತಮ ಕ್ರೀಡಾಪಟು ಎಂಬ ನಿಟ್ಟಿನಲ್ಲಿ ಕೌಶಿಕ್ ಕುಂಡಡ್ಕ ಇವರನ್ನು ಅಭಿನಂದಿಸಲಾಯಿತು. ದೇವಿ ಪ್ರಸಾದ್ ಕುಕ್ಕಾಜೆ ಸ್ವಾಗತಿಸಿ ಸತ್ಯ ಪ್ರಸಾದ್ ಕುಕ್ಕಾಜೆ ವಂದಿಸಿದರು ರವಿ ಎಸ್ಎಂ ಕುಕ್ಕಾಜೆ ಕಾರ್ಯಕ್ರಮ ನಿರೂಪಣೆ ಮಾಡಿದರು.

RELATED ARTICLES
- Advertisment -
Google search engine

Most Popular