Saturday, May 24, 2025
Homeಅಪರಾಧಲಂಚವಾಗಿ ಆಲೂಗಡ್ಡೆ ಬೇಡಿಕೆ : ಪೊಲೀಸ್ ಅಧಿಕಾರಿ ಅಮಾನತು

ಲಂಚವಾಗಿ ಆಲೂಗಡ್ಡೆ ಬೇಡಿಕೆ : ಪೊಲೀಸ್ ಅಧಿಕಾರಿ ಅಮಾನತು

ಲಕ್ಕೋ : ರೈತರೊಬ್ಬರಿಂದ ಲಂಚವಾಗಿ ಆಲೂಗಡ್ಡೆ ಬೇಡಿಕೆಯಿಟ್ಟಿದ್ದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿರುವ ಘಟನೆ ಉತ್ತರ ಪ್ರದೇಶದ ಕನೌಜ್‌ನಲ್ಲಿ ಎಂಬಲ್ಲಿ ನಡೆದಿದೆ. ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಪೊಲೀಸ್ ಅಧಿಕಾರಿ ರಾಮ್ ಕೃಪಾಲ್ ಸಿಂಗ್ ಲಂಚ ಕೇಳಿರುವ ಆರೋಪದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಂಚಕ್ಕಾಗಿ ಆಲೂಗಡ್ಡೆ ಎಂಬ ಪದವನ್ನು ಕೋಡ್ ಆಗಿ ಬಳಸಲಾಗಿದೆ ಎಂಬುದು ತನಿಖೆಯಿಂದ ಸಾಬೀತಾಗಿದೆ. ಬಳಿಕ ಕನೌಜ್ ಎಸ್‌ಪಿ ಅಮಿತ್ ಕುಮಾರ್ ಆನಂದ್ ಅವರು ಸಬ್ ಇನ್‌ಸ್ಪೆಕ್ಟರ್ ಅವರನ್ನು ಅಮಾನತುಗೊಳಿಸಿ ಆದೇಶ ಮಾಡಿರುತ್ತಾರೆ. ವೈರಲ್ ಆಡಿಯೋದಲ್ಲಿ ಆರೋಪಿ ರೈತರೊಬ್ಬರಿಂದ 5 ಕೆ. ಜಿ. ಆಲೂಗಡ್ಡೆಗೆ ಬೇಡಿಕೆ ಇಡುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ಕಷ್ಟ ಎಂದು ರೈತ ತಿಳಿಸಿದ್ದು 5 ಕೆ. ಜಿ. ಬದಲಿಗೆ 2 ಕೆ. ಜಿ. ನೀಡುತ್ತೇನೆಂದು ಹೇಳಿರುತ್ತಾರೆ. ಅಂತಿಮವಾಗಿ 3 ಕೆ. ಜಿ .ಗೆ ಒಪ್ಪಂದವಾಗುತ್ತದೆ.

RELATED ARTICLES
- Advertisment -
Google search engine

Most Popular