ಮೂಡುಬಿದಿರೆ : ವಜ್ರ ಮಹೋತ್ಸವ ಆಚರಿಸುತ್ತಿರುವ ಮಂಗಳೂರಿನ ಎಸ್ಕೆ ಗೋಲ್ಡ್ ಸ್ಮೀತ್ ಇಂಡಸ್ಟ್ರೀಯಲ್ ಕೋ-ಆಪರೇಟಿವ್ ಸೊಸೈಟಿಯ ಮೂಡುಬಿದಿರೆ ಶಾಖೆಯಲ್ಲಿ ವನಮಹೋತ್ಸವದಂಗವಾಗಿ ಹಣ್ಣಿನ ಸಸಿ ವಿತರಣಾ ಕಾರ್ಯಕ್ರಮವು ಗುರುವಾರ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಗ್ರಾಹಕರಿಗೆ ಗಿಡಗಳನ್ನು ವಿತರಿಸಿದ ಎಸ್ಕೆಜಿಐಯ ಉಪಾಧ್ಯಕ್ಷ ಆನಂದ ಆಚಾರ್ಯ ಮಾತನಾಡಿ ಪ್ರಕೃತಿ ಸಮತೋಲನದಲ್ಲಿರ ಬೇಕಾದರೆ ಮರಗಿಡಗಳನ್ನು ಬೆಳೆಸುವುದು ಅಗತ್ಯ. ಸಂಸ್ಥೆಯು ಆರ್ಥಿಕ ವ್ಯವಹಾರದೊಂದಿಗೆ ಸಾಮಾಜಿಕ ಕಳಕಳಿ, ಪರಿಸರ ಕಾಳಜಿಯನ್ನು ಹೊಂದಿದ್ದು ಪೂರಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಕರ ಆಚಾರ್ಯ ಮಾತನಾಡಿ ಪರಿಸರದ ಮಹತ್ವವನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಶ್ರೀನಾಥ್ ಆಚಾರ್ಯ, ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ, ಕಟ್ಟಡದ ಮಾಲೀಕ ವಿಘ್ನೇಶ್ ಪೈ, ಪತ್ರಕರ್ತ ಧನಂಜಯ ಮೂಡುಬಿದಿರೆ, ಛಾಯಾಗ್ರಾಹಕ ಅಶ್ವತ್ಥಾಮ ಆಚಾರ್ಯ, ಮತ್ತಿತರರು ಭಾಗವಹಿಸಿದರು. ನಿರ್ದೇಶಕ ಮಂಜುನಾಥ ಆಚಾರ್ಯ ಉಪಸ್ಥಿತರಿದ್ದರು.
ಶಾಖಾ ಪ್ರಬಂಧಕಿ ಕಸ್ತೂರಿ ದೇವರಾಜ್ ಸ್ವಾಗತಿಸಿದರು. ಸಿಬ್ಬಂದಿ ಪ್ರಶಾಂತ ಕಾರ್ಯಕ್ರಮ ನಿರ್ವಹಿಸಿದರು.
ಎಸ್ಕೆಜಿಐಯಿಂದ ಹಣ್ಣಿನ ಸಸಿ ವಿತರಣೆ
RELATED ARTICLES