ನಾಡಿನ ಸಾಹಿತಿಗಳು, ಕಲಾವಿದರು, ಸಂತ -ಶರಣರು, ಪೂಜ್ಯ ಮಹನೀಯರ, ಅನನ್ಯ ಕೊಡುಗೆಯಿಂದ ಕನ್ನಡ ಭಾಷೆ ಸಮೃದ್ಧಗೊಂಡಿದೆ, ಕನ್ನಡ ಭಾಷೆಯನ್ನು ಪ್ರೀತಿಸಿ, ಗೌರವಿಸುವುದು ಕನ್ನಡಿಗರ ಕೆಲಸವಾಗಬೇಕು. ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು, ವಕೀಲರು, ಕನ್ನಡದಲ್ಲಿ ವ್ಯವಹರಿಸಬೇಕು, ಜಿಲ್ಲಾ ವಕೀಲರ ಸಂಘ ರಚನಾತ್ಮಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಡಾ.ಜಿ.ಎಂ.ಗAಗಾಧರಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದರು.
ಅವರು ನಗರದ ಜಿಲ್ಲಾ ವಕೀಲರ ಸಂಘದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ, ಜಿಲ್ಲಾ ವಕೀಲರ ಸಂಘ ದಾವಣಗೆರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಶ್ರೀ ಬಸವೇಶ್ವರ ಗ್ರಾಮೀಣ ಸಾಂಸ್ಕೃತಿಕ ಕಲಾ ವೇದಿಕೆ ಎಲೆಬೇತೂರು, ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ,೬೯ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜಾನಪದ ಕಲಾಮೇಳ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ, ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಬಸವೇಶ್ವರ ಕಲಾವೇದಿಕೆಯು ಗ್ರಾಮೀಣ ಕಲಾವಿದರ ಜಾನಪದ ಕಲಾ ಪ್ರದರ್ಶನ ಗಳನ್ನು ಏರ್ಪಡಿಸಿ, ಕಲೆಯ ಸಂಭ್ರಮದೊಂದಿಗೆ ವಕೀಲರುಗಳ ಮನತಣಿಸಿ, ಕನ್ನಡದ ಕಂಪನ್ನು ಹರಡಿರುವುದು ಸಂತಸದ ಸಂಗತಿ ಎಂದು ಅವರು ಹೇಳಿದರು.
ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆಯವರು, ಕನ್ನಡ ಭಾಷೆ ಸರಳ, ಸುಲಭ ಹಾಗೂ ಜನಸಾಮಾನ್ಯರ ಭಾಷೆಯಾಗಿದೆ, ಇತಿಹಾಸ ಪರಂಪರೆ ಇರುವಂತಹ ಶ್ರೇಷ್ಠ ಭಾಷೆಯೂ ಆಗಿದೆ, ಆದ್ದರಿಂದ ನಾವೆಲ್ಲರೂ ನ್ಯಾಯಾಲಯದಲ್ಲಿ ಅತಿ ಹೆಚ್ಚು ಕನ್ನಡ ಭಾಷೆ ಬಳಸಲು ಮುಂದಾಗೋಣವೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ,ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್. ಎಚ್. ಅರುಣ್ ಕುಮಾರ್ ರವರು ಮಾತನಾಡಿ, ನಾವು ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು, ಭಾಷೆಯ ಸೊಬಗು- ಸೊಗಡನ್ನು ಬಳಸುವುದರ ಮೂಲಕ ಆನಂದಿಸಬೇಕು, ಗ್ರಾಮೀಣ ಕಲೆಗಳು ಬದುಕಿಗೆ ಮೌಲ್ಯಗಳನ್ನು ನೀಡುತ್ತವೆ, ಜಾನಪದ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುವಂತಾಗಬೇಕೆAದು ತಿಳಿಸಿದರು.
ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ಎನ್.ಎಸ್. ರಾಜು, ಸಂಘದ ಅಧ್ಯಕ್ಷ ಕೆ. ಎಂ. ಅರುಣ್ ಕುಮಾರ್ ಉಪಸ್ಥಿತರಿದ್ದರು. ವಿಠೋಬ ರಾವ್ ರಿಂದ ಪ್ರಾರ್ಥನೆ, ಜಿ.ಕೆ. ಬಸವರಾಜ್ ಸ್ವಾಗತಿಸಿ, ಎ. ಎಸ್. ಮಂಜುನಾಥ್ ವಂದಿಸಿದರು, ಎಸ್. ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ಗ್ರಾಮೀಣ ಕಲಾವಿದರಾದ ಬಿ. ಹನುಮಂತಾಚಾರಿ, ಬಸವನಗೌಡ ಪಾಟೀಲ್ , ಕೆ. ಜಯ್ಯಣ್ಣ ಇವರ ತಂಡದವರಿAದ, ವೀರಗಾಸೆ, ಭಜನೆ, ಡೊಳ್ಳಿನ ಪದಗಳು ಪ್ರದರ್ಶನಗೊಂಡವು. ವಕೀಲರ ವೃಂದ ಕಲಾ ಸಂಭ್ರಮದಲ್ಲಿ ಸಂತಸಗೊಂಡರು.