Friday, March 21, 2025
Homeಉಡುಪಿದೊಡ್ಡಣ್ಣ ಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಪ್ರಸನ್ನ ಕ್ಷಿ ಪ್ರತಿಷ್ಠೆ ಮಹಾಚಂಡಿಕಾಯಾಗ ಸಂಪನ್ನ

ದೊಡ್ಡಣ್ಣ ಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಪ್ರಸನ್ನ ಕ್ಷಿ ಪ್ರತಿಷ್ಠೆ ಮಹಾಚಂಡಿಕಾಯಾಗ ಸಂಪನ್ನ

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಗಾಯತ್ರಿ ಧ್ಯಾನಪೀಠದಲ್ಲಿ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ಪರಿವಾರ ಶಕ್ತಿಯಾಗಿ ಶ್ರೀ ಪ್ರಸನ್ನಕ್ಷೆಯ ಪ್ರತಿಷ್ಠಾಪನೆಯೂ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು.

ಆದ್ಯ ಗಣಪತಿಯಾಗ ಪಂಚವೀಂಶತಿ ಕಲಾಶಾರಾಧನೆ ಪ್ರತಿಷ್ಠಾ ಪ್ರಧಾನ ಹೋಮಗಳು ಸಂಪನ್ನಗೊಂಡವು.
ಗತಕಾಲದಲ್ಲಿ ಕ್ಷೇತ್ರ ರಚನೆಗೆ ಕಾರಣೀಭೂತರಾಗಿ ತಪಸ್ಸನ್ನ ಆಚರಿಸಿದ ಶ್ರೀ ಕಪಿಲ ಮಹರ್ಷಿಗಳ ಸಾನಿಧ್ಯದಲ್ಲಿ ನವಕ ಕಲಶ ಪ್ರಧಾನ ಹೋಮ ಕಲಶಾಭಿಷೇಕ ಕಾಮಧೇನುವಿಗೆ ವಿಶೇಷ ಪೂಜೆಗಳು ವೇದಮೂರ್ತಿ ಹೇರೂರು ಆನಂದ ಭಟ್ ಅವರು ನೆರವೇರಿಸಿದರು. ವೇದಮೂರ್ತಿ ವಾಮನ ಭಟ್ ಅವರ ಪ್ರಧಾನತ್ವದಲ್ಲಿ ನೆರವೇರಿದ ಮಹಾ ಚಂಡಿಕಾಯಾಗದಲ್ಲಿ ಶ್ರೀಯುತ ವೇದಮೂರ್ತಿ ಪೆರಡೂರು ದಿನೇಶ್ ಅಡಿಗ, ವೇದಮೂರ್ತಿ ಸೀತಾರಾಮ ಭಟ್, ಹೆರ್ಗ ಗಣೇಶ್ ಭಟ್ ನಾಗಶಯನ, ಸ್ವಸ್ತಿಕಾಚಾರ್ಯ ಸಹಕರಿಸಿದರು. ಮಹಾಚಂಡಿಕಾಯಿಯಾಗದಲ್ಲಿ ಬ್ರಾಹ್ಮಣ ಸುವಾಸಿನಿಯರು ಅಧಿಕ ಸಂಖ್ಯೆಯಲ್ಲಿ ಆರಾಧನೆ ಸ್ವೀಕರಿಸಿದರು.

ವಿಶೇಷವಾದ ಶೃಂಗಾರವಾದ್ಯ ನಾದಸ್ವರ ವಾದ್ಯ ಕೊಂಬು ಕಹಳೆ ಚಂಡೆ ವಾದನ ದೊಂದಿಗೆ ಶ್ರೀ ಪ್ರಸನ್ನಕ್ಷೆಯ ಪ್ರತಿಷ್ಠಾಪನೆ ನೆರವೇರಿತು. ಕ್ಷೇತ್ರದಲ್ಲಿ ದುರ್ಗಾ ಆದಿಶಕ್ತಿಯನ್ನು ವಿಶೇಷವಾಗಿ ಶ್ರೀಯುತ ಆನಂದ್ ಬಾಯಿರಿ ಅಲಂಕರಿಸಿದರು ಅನಿಶಾಚಾರ್ಯ ಮಹಾಪೂಜೆ ನೆರವೇರಿಸಿದರು.

ಮಧ್ಯಾನ ನೆರವೇರಿದ ಮಹಾ ಅನ್ನಸಂತರ್ಪಣೆಯಲ್ಲಿ ಸಹಸ್ರ ಸಂಖ್ಯೆಗೂ ಅಧಿಕ ಭಕ್ತರುಗಳು ಅನ್ನಪ್ರಸಾದ ಸ್ವೀಕರಿಸಿದರು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.

RELATED ARTICLES
- Advertisment -
Google search engine

Most Popular