ದಾವಣಗೆರೆ : ವಿಜಯನಗರ ಜಿಲ್ಲೆಯ ಕಡಲಬಾಳು ಶ್ರೀ ಸುಜ್ಞಾನ ಪೀಠ ರಂಗ ಕಲಾವಿದರ, ಸಾಧಕರ ಶ್ರೀಮಾತ ಪ್ರಕಾಶನದಿಂದ ದಾವಣಗೆರೆಯ ಸಾಹಿತಿ, ಕವಿ, ಅಂಕಣಕಾರ ಸಾಲಿಗ್ರಾಮ ಗಣೇಶ್ ಶೆಣೈ ಅವರನ್ನು ನಾಲ್ಕು ದಶಕಗಳ ವಿವಿಧ ಸಂಘಟನೆಗಳ ಸಾಧನೆಯನ್ನು ಗುರುತಿಸಿ “ಡಾ. ದ.ರಾ.ಬೇಂದ್ರೆ ಸದ್ಭಾವನ ಸೇವಾ ರತ್ನ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ. ನಾಗರಾಜ ತಂಬ್ರಹಳ್ಳಿ ತಿಳಿಸಿದ್ದಾರೆ.
ದಿನಾಂಕ 08.12.2024 ರಂದು ಭಾನುವಾರ ಧಾರವಾಡದ ರಂಗಾಯಣ ಸಾಂಸ್ಕೃತಿಕ ಸಮುಚ್ಛಯ ಸಭಾ ಭವನದಲ್ಲಿ ನಡೆಯುವ ಈ ಪ್ರಶಸ್ತಿ ಪ್ರಧಾನ ನಡೆಯಲಿದ್ದು ಕಲಾಕುಂಚ, ಯಕ್ಷರಂಗ, ಸಿನಿಮಾಸಿರಿ, ಕರ್ನಾಟಕ ಸಗಮ ಸಂಗೀತ ಪರಿಷತ್, ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಸಿನಿಮಾಸಿರಿ ಸಂಸ್ಥೆ, ಕರ್ನಾಟಕ ಸಗಮ ಸಂಗೀತ ಪರಿಷತ್, ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಛಾಯಾಗ್ರಾಹಕ ಸಂಘ, ಗೌಡ ಸಾರಸ್ವತ ಸಮಾಜ, ಸಮಾನ ಮನಸ್ಕರ ವೇದಿಕೆ, ಬಿಚ್ಕತ್ತಿ ಕುಟುಂಬ, ಸೇರಿದಂತೆ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.