Friday, May 23, 2025
Homeಮಂಗಳೂರುಕುತ್ತಾರ್‌ ರಾಜರಾಜೇಶ್ವರಿ ದೇವಿಯ ಸನ್ನಿದಾನದಲ್ಲಿ ಆ.16ಕ್ಕೆ ʻಅಜನೆ ಆಪುಂಡುಗೆʼ ನಾಟಕದ ಪ್ರಥಮ ಪ್ರದರ್ಶನ

ಕುತ್ತಾರ್‌ ರಾಜರಾಜೇಶ್ವರಿ ದೇವಿಯ ಸನ್ನಿದಾನದಲ್ಲಿ ಆ.16ಕ್ಕೆ ʻಅಜನೆ ಆಪುಂಡುಗೆʼ ನಾಟಕದ ಪ್ರಥಮ ಪ್ರದರ್ಶನ

ಮಂಗಳೂರು: ಇಂಚರ ಕಲಾವಿದೆರ್ ಕುಡ್ಲ ತಂಡದ ಈ ವರ್ಷದ ವಿಭಿನ್ನ ಶೈಲಿಯ ಹಾಸ್ಯಮಯ ಸಾಂಸಾರಿಕ ನಾಟಕದ ಪ್ರಪ್ರಥಮ ಪ್ರಯೋಗವು ಆಗಸ್ಟ್ 16 ವರಮಹಾಲಕ್ಷ್ಮಿ ಪೂಜೆಯಂದು ಶ್ರೀ ಕ್ಷೇತ್ರ ಕುತ್ತಾರ್ ರಾಜರಾಜೇಶ್ವರಿ ದೇವಿಯ ಸನ್ನಿಧಾನದಲ್ಲಿ ರಾತ್ರಿ 8 ಗಂಟೆಗೆ ನಡೆಯಲಿದೆ.
ಈ ತಂಡದ ಸಾರಥಿ ರಕ್ಷಿತ್ ಅಮೀನ್ ಕೊಲ್ಯ, ತಂಡದ ಸಂಚಾಲಕರಾಗಿ ಸುಜಿತ್ ಕೋಟೆಕಾರ್ ಕಾರ್ಯನಿರ್ವಹಿಸಿದ್ದಾರೆ. ನಾಟಕದ ಕಥೆ ಸಂಭಾಷಣೆ ಸಾಹಿತ್ಯದ ಜೊತೆಗೆ ನಿರ್ದೇಶನವನ್ನು ವಿನಯ್ ಕುಮಾರ್ ಅಧ್ಯಪಾಡಿ ಮಾಡಿದ್ದಾರೆ.
ನಾಟಕದ ಸಂಗೀತದ ಜೊತೆಗೆ ಸಾಹಿತ್ಯ ಗಾಯನ ಆದಿತ್ಯ ಆಚಾರ್ಯ ಪರ್ಕಳ, ಸಾಹಿತ್ಯ ದೇವೆರೆ ಕಿನ್ನಿ ಖ್ಯಾತಿಯ ಅಮರ್ನಾಥ್ ಪೂಪಾಡಿಕಲ್, ತಂಡಕ್ಕೆ ಸಂಪೂರ್ಣ ಸಹಕಾರ ಹರೀಶ್ ಕೊಟ್ರಗುತ್ತು, ಮೇಕಪ್ ಚೇತನ್ ಕಲ್ಲಡ್ಕ ಇವರು ಮಾಡಲಿದ್ದಾರೆ.
ಧ್ವನಿ ಬೆಳಕು ವಿಶ್ವ ಸೌಂಡ್ಸ್ ಮರವೂರು ಅವರದ್ದು ಇರಲಿದ್ದು, ಕಲಾವಿದರಾಗಿ ಹಿರಿಯ ಕಲಾವಿದರಾದ ಸುರೇಶ್ ಆಚಾರ್ಯ, ಕಿಶನ್, ರಾಜೇಂದ್ರ, ಸುಕೇಶ್, ಸಂದೀಪ್ ಶೆಟ್ಟಿ, ಆನಂದ್, ರಂಜಿತ್, ಪ್ರವೀಣ್ ಭಂಡಾರಿ, ಮನೀಶ್ ಪೆರ್ಲ,ಅಶ್ವಿನಿ, ಲಾವಣ್ಯ.
ಜೊತೆಗೆ “ಒರಿಯರ್ದೋರಿ ಅಸಲ್” ಚಿತ್ರದ “ನಾತು ” ಖ್ಯಾತಿಯ ಅಶೋಕ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರೆ. ಹೊಸ ಕಲಾವಿದರೊಂದಿಗೆ, ಹಿರಿಯ ಅನುಭವಿ ಕಲಾವಿದರ ಜೊತೆಗೆ ಆಗಸ್ಟ್ 16ಕ್ಕೆ ರಂಗ ಭೂಮಿಗೆ ಹೊಸ ನಾಟಕ ಪರಿಚಯವಾಗಲಿದೆ.

RELATED ARTICLES
- Advertisment -
Google search engine

Most Popular