ದುಬೈ ತುಳು ಪಾತೆರ್ಗ ತುಳು ಒರಿಪಾಗ ಇದರ 11ನೇ ವರ್ಷದ ಸಂಭ್ರಮಚಾರಣೆಯಲ್ಲಿ ತುಳುನಾಡ ಗೊಬ್ಬುದ ಕಾರ್ಯಕ್ರಮ ಮಾ.3 ಭಾನುವಾರದಂದು ದುಬೈಯ ಝಬೀಲ್ ಪಾರ್ಕ್ ನಲ್ಲಿ ನಡೆಯಿತು.
ತುಳುನಾಡಿನ ಸಂಪ್ರದಾಯದಂತೆ ಭಾಗವಹಿಸಲು ಬಂದ ಎಲ್ಲ ತುಳುವರಿಗೆ ಬೆಲ್ಲ ನೀರು ಮತ್ತು ಎಲೆ ಅಡಿಕೆ ನೀಡುವ ಮೂಲಕ ಸ್ವಾಗತಿಸಿದರು.
ಪ್ರಿಶಾ, ಶಾರ್ವಿ, ಮಾಸ್ಟರ್ ಸುಹನ್ ಇವರು ದೇವರ ಪ್ರಾರ್ಥನೆಯೊಂದಿಗೆ ದುಬೈಯ ತುಳು ಕನ್ನಡ ಸಂಘಟನೆಯ ಹಿರಿಯರಾದ ಸರ್ವೋತ್ತಮ ಶೆಟ್ಟಿ, ಸಂಸ್ಥೆಯ ಹಿರಿಯ ಸದಸ್ಯ ಅಜ್ಮಲ್ ದುಬೈ, ನೊವೆಲ್ ಅಲ್ಮೆಡ ಇವರು ತುಳುವಪ್ಪೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಕಾರ್ಯಕ್ರಮದ ಉದ್ಘಾಟನೆ ಮಾಡಿ ಹರಸಿದರು.
ಊರಿನಿಂದ ಬಂದ ಹಿರಿಯರಾದ ಸುಶೀಲ ಸಂಜೀವ ಪೂಜಾರಿ ಮತ್ತು ಸುಲೋಚನಾ ಜಯ ಅಮಿನ್ ಅವರು ಭೂಲೋಕದ ಕಲ್ಪವೃಕ್ಷ ತೆಂಗಿನಗಿಡ ನೇಡುವ ಮೂಲಕ ತುಳುನಾಡಿನ ಆಟಕ್ಕೆ ಚಾಲನೆ ನೀಡಿದರು.
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಹರೀಶ್ ಬಂಗೇರ, ಡೋನಿ ಕೊರೆಯ, ಜಯಂತ್ ಶೆಟ್ಟಿ, ಮನೋಹರ್ ಹೆಗಡೆ, ಶೋಧನ್ ಪ್ರಸಾದ್, ಸುದರ್ಶನ್ ಹೆಗಡೆ, ಸತೀಶ್ ಪೂಜಾರಿ, ಜೋಸೆಫ್ ಮಥಾಯಿಸ್ ಮತ್ತು ಸಂಸ್ಥೆಯ ಹಿರಿಯ ಸದಸ್ಯ ಸತೀಶ್ ಉಳ್ಳಾಲ್, ಸಂದೀಪ್ ಕೊಟ್ಯಾನ್, ಅಧ್ಯಕ್ಷ ಪ್ರೇಮ್ ಜೀತ್ ಉಪಸ್ಥಿತರಿದ್ದರು.
ದುಬೈಯ ಹಿರಿಯರು, ಸಮಾಜ ಸೇವಕರಾದ ಮಾಧವ ಪೆಜಮಾಡಿ ಕೋಡಿ ಇವರಿಗೆ ಸನ್ಮಾನ ಮಾಡಿ “ಅಪ್ಪೆ ಭಾಷೆ ತುಳುವ ತುಡರ್” ಎನ್ನುವ ಬಿರುದು ನೀಡಿ ಸನ್ಮಾನ ಮಾಡಿದರು. ದುಬೈಯ ತುಳು ಕನ್ನಡ ಸಂಘಟನೆಯಲ್ಲಿ ಉತ್ತಮ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಶಮೀರ್ ಬೋಳಾರ, ತುಳು ಯೂಟ್ಯೂಬ್ ಚಾನಲ್ ಮೂಲಕ ತುಳುನಾಡ ಸಂಸ್ಕೃತಿಯನ್ನು ತಿಳಿಸುವ ಸವಿತಾ ಸಂದೀಪ್ ದೇವಾಡಿಗ ಮತ್ತು ಬಾಕ್ಸಿಂಗ್ ಕ್ರೀಡಾಪಟು ಸಚಿನ್ ಪೂಜಾರಿ, ಸಮಾಜ ಸೇವಕರಾದ ಮಾಧವ ಪೂಜಾರಿ ಇವರಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನ ಮಾಡಿದರು.

ತುಳುನಾಡಿನ ವಿವಿಧ ರೀತಿಯ ಅಡಿಗೆಗಳನ್ನು ತಯಾರಿಸಲಾಗಿತ್ತು ಮತ್ತು ಗೆದ್ದ ತಂಡಕ್ಕೆ ಪ್ರಶಸ್ತಿ ಪತ್ರ, ಪದಕ ನೀಡಿ ಸನ್ಮಾನ ಮಾಡಿದರು. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ದಾನಿಗಳಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದನೆ ಸಲ್ಲಿಸಿದರು. ನೊವೆಲ್ ಅಲ್ಮೇಡಾ ಮತ್ತು ಅಮರ್ ನಂತೂರ್, ಶೋಭಿತ ಪ್ರೇಮ್ ಜೀತ್, ಜಯ ಪ್ರೇಮಾನಂದ್, ಲಕ್ಷ್ಮೀ ಪೂಜಾರಿ, ಅಶ್ವಿನಿ ಸತೀಶ್, ಲಿಖಿತ ದೀಪಕ್, ಶ್ವೇತಾ, ಸಂದೀಪ್ ಆಟದ ನಿರ್ವಹಣೆ ಮಾಡಿದರು.

500 ಕ್ಕಿಂತ ಹೆಚ್ಚು ದುಬೈಯ ಬಂಧು ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ರೀತು ಅಂಚನ್ ಕುಲಶೇಖರ ಸ್ವಾಗತಿಸಿ ಸಂಸ್ಥೆಯ ಸಾಧನಯನ್ನು ತಿಳಿಸಿ, ಕಾರ್ಯಕ್ರಮವನ್ನು ನಡೆಸಿಕೊಟ್ಟು ಧನ್ಯವಾದ ಅರ್ಪಿಸಿದರು. ತುಳು ಪಾತೆರ್ ಗ ತುಳು ಒರಿಪಾಗದ ಅಧ್ಯಕ್ಷರು, ಸರ್ವಸದಸ್ಯ ಪಾಲ್ಗೋಳುವಿಕೆ ಮತ್ತು ಸಂಪೂರ್ಣ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.