ಶಿಕ್ಷಣ ಅಮೂಲ್ಯ ಪ್ರಕ್ರಿಯೆ.ಶಾಲಾ ಶಿಕ್ಷಣದಲ್ಲಿ ಉತ್ತೀರ್ಣ ಅನುತ್ತೀರ್ಣ ಇರಲೇ ಬೇಕು.ನಾವು 1960ರಿಂದ ಇದನ್ನು ಅನುಭವಿಸಿಯೇ ಬಂದವರು.ಚೆನ್ನಾಗಿ ಕಲಿತವರು ಉತ್ತೀರ್ಣರಾಗುವರು.ಕಲಿಯದವರು ಅದೇ ತರಗತಿಯಲ್ಲಿದ್ದು ಮತ್ತೆ ಬುದ್ಧಿವಂತವರಾದವರೆಷ್ಟೋ.ಎಲ್ಲರೂ ಸಾರಾಸಗಟಾಗಿ ಉತ್ತೀರ್ಣರಾದರೆ ಕಲಿಕೆಯ ಮಹತ್ವ ಕಡಿಮೆಯಾಗುವುದು.ಕಲಿಯಬೇಕಾದ ಎಲ್ಲಾ ವಿಷಯಗಳು ಪ್ರಾಮುಖ್ಯವೇ..ಗುರುಗಳ ಮೂಲಕ ಕಲಿತು ಉತ್ತೀರ್ಣ ವಾಗುವ ಸಂಭ್ರಮವೇ.ಒಂದು ವೇಳೆ ಅನುತ್ತೀರ್ಣರಾದರೆಂದರೆ ಅವರಲ್ಲಿ ಕಲಿಕಾ ಜಾಗೃತಿ ಮೂಡುವುದು.ಮುಂದೆ ಯಶಸ್ಸಿನ ಹಾದಿ ಸಿಗುವುದು.ನನಗೆ ಕಲಿಯುವ ಸಂದರ್ಭದಲ್ಲಿ ಏಳನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆಗೆ ಚೆನ್ನಾಗಿ ಅಭ್ಯಾಸ ಮಾಡಿ ಉತ್ತಮ ಅಂಕಗಳಿಸಿದ ಅನುಭವವಿದೆ.ಮೊದಲು ತರಗತಿವಾರು ವಾರ್ಷಿಕ ಪರೀಕ್ಷೆ ಉತ್ತೀರ್ಣ ಅನುತ್ತೀರ್ಣ ಪದ್ಧತಿ ಇತ್ತು.ಹತ್ತನೇ ತರಗತಿಗೆ ರಾಜ್ಯ ಮಟ್ಟದ ಪಬ್ಲಿಕ್ ಪರೀಕ್ಷೆ ಕ್ರಮಪ್ರಕಾರ ಮೌಲ್ಯಯುತವಾಗಿ ನಡೆಯುತ್ತಿತ್ತು.ಎಲ್ಲಾ ವಿಚಾರಗಳಲ್ಲಿ ಕಾಲಕಾಲ ಪರಿವರ್ತನೆ ಸಹಜ.ಹಾಗೇ ಕಲಿಕೆಯಲ್ಲೂ ಒಂದರಿಂದ ಒಂಬತ್ತನೇ ತರಗತಿಯವರೆಗೆ ಎಲ್ಲರೂ ಉತ್ತೀರ್ಣರೇ..ಏಳನೇ ತರಗತಿ ಜಿಲ್ಲಾ ಮಟ್ಟದ ಪರೀಕ್ಷೆಯೂ ನಿಂತು ಹೋಯಿತು.ಪರಿಣಾಮ ಕಲಿಕಾ ಪ್ರಮಾಣ ಮಹತ್ವ ಕುಂಠಿತವಾಯಿತೆಂದೇ ನನ್ನ ಅನುಭವ.ಎಸ್ಸೆಸೆಲ್ಸಿ ಪರೀಕ್ಷೆ ಮಹತ್ವವೂ ಕುಂಠಿತಗೊಂಡಿತು.ಎರಡು ಮೂರು ಸಪ್ಲಿಮೆಂಟರಿ ಪರೀಕ್ಷೆ ಇದೆಯಲ್ಲ..ಓದಿದರಾಯಿತು..ಬರೆದರಾಯಿತು ಎಂಬ ತಾತ್ಸಾರ ಭಾವನೆಯ ಪರಿಣಾಮ ಕಲಿಕಾ ಮಟ್ಟ ತನ್ನ ಮಹತ್ವ ಕಳೆದು ಕೊಂಡಿತು.ಇದರಿಂದ ಯುವಜನತೆಯ ಜೀವನ ಪದ್ಧತಿ ಸೂತ್ರ ಕಡಿದ ಪಟದಂತಾಯಿತು..ನಾನಾ ಚಟಗಳಿಂದ ಜೀವನ ಮಟ್ಟವೇ ಕುಸಿಯಿತು.ಬದಲಾವಣೆಯ ತಂಗಾಳಿ ಬೀಸಬೇಕು.ಮುಂದಿನ ನಾಗರಿಕ ಬದುಕು ಬೆಳಗಬೇಕಾದರೆ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು.ಅಧ್ಯಾಪಕರ ನೇಮಕವಾಗಬೇಕು.ಮಾಧ್ಯಮಾಧಾರಿತ, ಮೌಲ್ಯಯುತ ಶಿಕ್ಷಣ ವ್ಯವಸ್ಥೆಗಳಿರಬೇಕು.ಮಕ್ಕಳಲ್ಲಿ ನಾವು ಕಷ್ಟಪಟ್ಟು ಓದು ಮುಂದಿನ ತರಗತಿಗೆ ಹೋಗಬೇಕೆಂಬ ಛಲ-ಬಲ ತುಂಬಬೇಕು.ಈ ಕಾರಣದಿಂದ ತರಗತಿವಾರು ಅನುತ್ತೀರ್ಣಕ್ರಮವಿರಬೇಕು.ಸಾಧ್ಯವಾದರೆ ಈ ಹಿಂದಿನಂತೆ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಹಾಗೂ ಎಸ್ಸೆಸ್ಸೆಲ್ಸಿಗೆ ರ್ಯಾಂಕ್ ಪದ್ಧತಿ ಜಾರಿಗೊಳಿಸಿ ಶಿಕ್ಷಣದ ಬುಡವನ್ನು ಗಟ್ಟಿಗೊಳಿಸ ಬೇಕು.ಕೇವಲ ಶಾಲಾ ಕಟ್ಟಡಗಳ ನಿರ್ಮಿಸಿದರೆ ಸಾಲದು… ಕನಿಷ್ಠ ವಿಷಯವಾರು ಶಿಕ್ಷಕರ ನೇಮಕವಾಗಬೇಕು.ಅವರನ್ನು ಕಲಿಕೆಯ ಹೊರತಾಗಿ ಅನ್ಯಕಾರ್ಯಗಳಿಗೆ ಬಳಸಿಕೊಳ್ಳ ಬಾರದು.ಮಧ್ಯಾಹ್ನದ ಅಕ್ಷರ ದಾಸೋಹ, ಮೊಟ್ಟೆ ಬೇಕು..ಆದರೆ ಅವುಗಳ ವ್ಯವಸ್ಥೆ ಲೆಕ್ಕ ಪತ್ರಗಳಿಗೆ ಬೇರೆಯೇ ವ್ಯವಸ್ಥೆ ಮಾಡಬೇಕು.ಆದಷ್ಟು ಖಾಸಗಿ ಶಾಲೆಗಳಿಗೆ ಕಡಿವಾಣ ಮಾಡಬೇಕು.ಸಾಧ್ಯವಾದರೆ ಖಾಸಗಿ ಶಾಲಾ ಶಿಕ್ಷಕರನ್ನು ಸರಕಾರಿ ಶಾಲೆಗಳಿಗೆ ವರ್ಗಾವಣೆ ಮಾಡಬಹುದು.ಒಟ್ಟಿನಲ್ಲಿ ನಮ್ಮ ಮಕ್ಕಳು ನಮ್ಮ ಭವಿಷ್ಯ.ಅವರ ಬಾಳು ಬೆಳಗಿ ಅವರು ರಾಷ್ಟ್ರದ ಸಂಪತ್ತಾಗ ಬೇಕು.ಈಗ ಏನು ಐದನೇ ತರಗತಿ ಎಂಟನೇ ತರಗತಿಗಳಲ್ಲಿ ಅನುತ್ತೀರ್ಣತೆ ಕ್ರಮ ಜಾರಿಗೊಳಿಸಬೇಕೆಂಬ ಕೂಗು ಕೇಳಿಬರುತ್ತದೋ ಅದು ನಮ್ಮ ರಾಜ್ಯದಲ್ಲೂ ಜಾರಿಯಾಗಬೇಕು.ಮಾಧ್ಯಮದ ಮೋಹ ಕಡಿಮೆಯಾಗಿ ಕನಿಷ್ಠ ಐದನೇ ತರಗತಿಯವರೆಗಾದರೂ ಮಾತೃಭಾಷೆಯಲ್ಲೇ ಶಿಕ್ಷಣ ದೊರೆಯುವಂತಾಗಬೇಕು.ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಬೇಕು.ತರಬೇತಿಹೊಂದಿದ ಶಿಕ್ಷಕರನ್ನು ಅವರ ಅರ್ಹತೆಯೊಂದಿಗೆ ನೇರವಾಗಿ ನೇಮಕಮಾಡಬೇಕು.ಕ್ರೀಡೆ,ಕಲೆ ಸಾಹಿತ್ಯ ಸಮಾಜ ಸೇವಾ ಸಂಬಂಧ ಸೃಜನಾತ್ಮಕ ಚಟುವಟಿಕೆಗಳಿಗೂ ಅವಕಾಶ ಮೌಲ್ಯಾಂಕನ ವ್ಯವಸ್ಥೆ ಇರಬೇಕು.ಈ ಬೇಕುಗಳೆಲ್ಲ ಸಾಕಾರಗೊಳ್ಳಬಹುದೇ..?? ಕಾದು ನೋಡೋಣ..
✍️ ನಾರಾಯಣ ರೈ ಕುಕ್ಕುವಳ್ಳಿ, ಎಂ.ಎ.ಬಿಎಡ್.ಶಿಕ್ಷಣದಲ್ಲಿ ಹಿರಿಮೆಗೆ ರಾಜ್ಯ ಪುರಸ್ಕೃತ ನಿವೃತ್ತ ಶಿಕ್ಷಕ.
ಶಿಕ್ಷಣ ಚಿಂತನೆ..ಬದಲಾವಣೆ ಪರ್ವ
RELATED ARTICLES