ಮಂಗಳೂರು: ಕದ್ರಿ ವಲಯದ ಯೆಯ್ಯಾಡಿ ಕ್ಷೇತ್ರದ ಕೊಂಚಾಡಿ ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜಪ್ಪ , ಅಧ್ಯಾಪಕ ವೃಂದದವರು, ವಲಯ ಒಕ್ಕೂಟ ಅಧ್ಯಕ್ಷರಾದ ಗೀತಾ ಪ್ರವೀಣ್, ಕದ್ರಿ ವಲಯದ ಮೇಲ್ವಿಚಾರಕಿ ಸವಿತಾ ಹೆಗ್ಡೆ, ಸೇವಾ ಪ್ರತಿನಿಧಿ ಸವಿತಾ ಮತ್ತು ಬಬಿತಾ ಸಂಘದ ಸದಸ್ಯರು ಹಾಗೂ ಶಾಲಾ ವಿದ್ಯಾರ್ಥಿನಿಯರು ಹಾಜರಿದ್ದು ಕಾರ್ಯಕ್ರಮವನ್ನು ನಡೆಸಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿಯನ್ನು ಅಧ್ಯಾಪಕರಾದ ಆಶಾ ಅವರು ನೀಡಿದರು. ಶಾಲಾ ವಿದ್ಯಾರ್ಥಿಗಳಿಂದ ಗಿಡವನ್ನು ನಾಟಿ ಮಾಡಿಸಲಾಯಿತು.