Tuesday, May 13, 2025
Homeಉಜಿರೆಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಸಹಕಾರದೊಂದಿಗೆ ಹೈನುಗಾರಿಕೆ ಕುರಿತು ರೈತ ಕ್ಷೇತ್ರ ಪಾಠ ಶಾಲೆ...

ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಸಹಕಾರದೊಂದಿಗೆ ಹೈನುಗಾರಿಕೆ ಕುರಿತು ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿಜಿಸ್ಟರ್ ಮಂಗಳೂರು ಪರಮಪೂಜ್ಯ ಖಾವಂದರು ಹಾಗೂ ಹೇಮಾವತಿ ಅಮ್ಮನವರ ಶುಭಾಶೀರ್ವಾದದೊಂದಿಗೆ ಇಂದು ವಿಶೇಷವಾಗಿ ಮಂಗಳೂರು ತಾಲೂಕಿನ ಸೋಮೇಶ್ವರ ವಲಯದ ತಲಪಾಡಿ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಸಹಕಾರದೊಂದಿಗೆ ಹೈನುಗಾರಿಕೆ ಕುರಿತು ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮವನ್ನು ಆ ಯೋಜನೆ ಮಾಡಲಾಗಿತ್ತು ವಿಶೇಷ ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಪ್ರಗತಿ ಬಂದು ತಂಡದ ಸದಸ್ಯರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತಲಪಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ವೈಭವ ಶೆಟ್ಟಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ತಲಪಾಡಿ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿಯಾದ ರಚನ ಕೆ.ಎಂ.ಎಫ್ ಒಕ್ಕೂಟದ ವಿಸ್ತರಣಾಧಿಕಾರಿ ಸರೋಜಿನಿ ಹಾಗೂ ಹಾಲು ಉತ್ಪಾದಕರ ಸಂಘ ತಲಪಾಡಿ ಇದರ ಸೆಕ್ರೆಟರಿ ನಳಿನಿ ಹಾಲು ಉತ್ಪಾದಕರ ಸಂಘದ ಬೋರ್ಡ್ ಮೆಂಬರ್ಸ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿಜಿಸ್ಟರ್ ಮಂಗಳೂರು ಇದರ ಕೃಷಿ ಅಧಿಕಾರಿ ಮೋಹನ್ ಹಾಗೂ ಸೋಮೇಶ್ವರ ವಲಯದ ಮೇಲ್ವಿಚಾರಕ್ಕೆ ಶಶಿಕಲ ಸೇವಾ ಪ್ರತಿನಿಧಿ ವಿಜಯ ಅದೇ ರೀತಿ ಯೋಜನೆಯ ಪಾಲುದಾರು ಸದಸ್ಯರುಗಳು ಉಪಸ್ಥಿತರಿದ್ದರು.

ಕೃಷಿ ಅಧಿಕಾರಿ ಮೊಹನ್ ಪ್ರಾಸ್ತವಿಕವಾಗಿ ಜಾನುವಾರಗಳಿಂದ ಭೂಮಿಗೆ ಶಕ್ತಿಯನ್ನು ತುಂಬುವುದರ ಜೊತೆಗೆ ಕೃಷಿಕನ ಆದಾಯ ಮಟ್ಟವನ್ನು ಹೆಚ್ಚಿಸುತ್ತದೆ ಒಬ್ಬ ಮನುಷ್ಯನಿಗೆ ಹುಟ್ಟಿದ ಕೂಡಲೇ ಮೊದಲ ಆಹಾರ ತಾಯಿಯ ಎದೆ ಹಾಲು ನಂತರ ಹಸುವಿನ ಹಾಲು ಅದೇ ರೀತಿ ಸಸ್ಯಗಳಿಗೂ ಸಹ ಮೊದಲ ಆಹಾರ ಬೀಜದಲ್ಲಿಯೇ ಇದ್ದರೆ ನಂತರದ ಆಹಾರ ಗೊಬ್ಬರದಿಂದ ಸಿಗುತ್ತದೆ ಆದ್ದರಿಂದ ಸಮರ್ಪಕ ಬದುಕಿನ ಸಮಗ್ರ ಕೃಷಿಗೆ ಪಶು ಸಂಗೋಪನೆ ಒಂದು ಅವಿಭಾಜ್ಯ ಅಂಗವಾಗಿದೆ ಎಂದರು ನಂತರ ಪಶುವೈದ್ಯಾಧಿಕಾರಿ ರಚನ ಅವರು ಹೈನುಗಾರಿಕೆಯಲ್ಲಿ ಅಳವಡಿಸಿಕೊಳ್ಳುವ ವಿಧಾನಗಳು, ಪಶುಗಳ ಆರೋಗ್ಯದ ಸ್ಥಿತಿ ಗತಿ ಮತ್ತು ಕರುಗಳ ಪಾಲನೆ ಹಾಗೂ ಸರ್ಕಾರಿ ಸ್ಕೀಮ್ ಗಳ ಬಗ್ಗೆ ಮಾಹಿತಿ ನೀಡಿದರು ಅದೇ ರೀತಿ ಕೆಎಂಎಫ್ ನ ವಿಸ್ತರಣಾಧಿಕಾರಿ ಸರೋಜಿನಿ ಅವರು ಜಾನುವಾರುಗಳಿಗೆ ಮೇವಿನ ತಯಾರಿ, ಹಾಲಿನ ಮಾರಾಟ ಮತ್ತು ಬಳಕೆ, ಕೃಷಿ ಭೂಮಿಯಲ್ಲಿ ಮೇವಿನ ತಯಾರಿ, ಅದರ ಜೊತೆಗೆ ಕೆಎಂಎಫ್ ನ ಅನುದಾನಗಳ ಕುರಿತು ಸರಕಾರಿ ಯೋಜನೆಗಳ ಕುರಿತು ಮಾಹಿತಿಯನ್ನು ನೀಡಿದರು.

RELATED ARTICLES
- Advertisment -
Google search engine

Most Popular