ಬೆಳ್ತಂಗಡಿ: ಸುಲ್ಕೇರಿಮೊಗ್ರು ಶ್ರೀ ದೈವ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ಜಾತ್ರೋತ್ಸವ ಪ್ರಯುಕ್ತ ಫೆ. 23ರಂದು ರಾತ್ರಿ 9 ಗಂಟೆಗೆ ʻಗೆಂದಗಿಡಿʼ ಎಂಬ ತುಳು ನಾಟಕ ನಡೆಯಲಿದೆ.
ಪುಶೋತ್ತಮ ಕೊಯಿಲಾ ಸಾರಥ್ಯದಲ್ಲಿ ಪ್ರಶಸ್ತಿ ವಿಜೇತ ತೆಲಿಕೆದ ಕಲಾವಿದೆರ್ ಕೊಯಿಲಾ ಅಭಿನಯಿಸುವ ಪಾರ್ದನ ಆಧಾರಿತ ಕುತೂಹಲಕಾರಿ ಈ ನಾಟಕವನ್ನು ದಿನೇಶ್ ಸಾಲಿಯಾನ್ ಕನಪಾದೆ ರಚಿಸಿ ನಿರ್ದೇಶಿಸಿದ್ದಾರೆ. ಅಕ್ಷಯ್ ಕಾವಳಕಟ್ಟೆ ಅವರ ಸಂಗೀತ ಹಾಗೂ ಅಶ್ವಥ್ ಸಂಗಬೆಟ್ಟು ಸಮಗ್ರ ನಿರ್ವಹಣೆ ನೀಡಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರಕಟಣೆ ತಿಳಿಸಿದೆ.