Friday, May 23, 2025
Homeರಾಜ್ಯನಾಲ್ಕನೇ ರಾಜ್ಯ ಕಲಾಮೇಳ 2024 ಸಾಧಕರಿಗೆ ಸನ್ಮಾನ, ರಂಗ ತಿಲಕ ಸಾಂಸ್ಕೃತಿಕ ಕಲಾ ಟ್ರಸ್ಟ್ ನ...

ನಾಲ್ಕನೇ ರಾಜ್ಯ ಕಲಾಮೇಳ 2024 ಸಾಧಕರಿಗೆ ಸನ್ಮಾನ, ರಂಗ ತಿಲಕ ಸಾಂಸ್ಕೃತಿಕ ಕಲಾ ಟ್ರಸ್ಟ್ ನ ಉದ್ಘಾಟನಾ ಕಾರ್ಯಕ್ರಮ ಹಾಗೂ ಲೋಗೋ ಬಿಡುಗಡೆ

ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪ ಸಂತೆಪೇಟೆ, ಶಿರಾ ಟೌನ್ ನಲ್ಲಿ ದಿನಾಂಕ 21.07.2024ರ ರವಿವಾರದಂದು ಬೆಳಗ್ಗೆ ಕಾರ್ಯಕ್ರಮ ನಡೆಯಿತು. ಕರ್ನಾಟಕ ಕಾಡುಗೊಲ್ಲ ಸಾಂಸ್ಕೃತಿಕ ಟ್ರಸ್ಟ್ (ರಿ)ಕುರಿಕೆಂಪನಹಳ್ಳಿ, ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಗೆ(ರಿ) ಚಿತ್ರದುರ್ಗ. ರಂಗತಿಲಕ ಸಾಂಸ್ಕೃತಿಕ ಕಲಾ ಟ್ರಸ್ಟ್ (ರಿ)ಯು ರಾಜಾಪುರ. ಸಂಡೂರು ತಾಲೂಕು ಬಳ್ಳಾರಿ ಜಿಲ್ಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುಮಕೂರು ಇವರ ಸಹಯೋಗದಲ್ಲಿ ನಾಲ್ಕನೇ ರಾಜ್ಯ ಕಲಾಮೇಳ 2024 ಸಾಧಕರಿಗೆ ಸನ್ಮಾನ. ಕಾರ್ಯಕ್ರಮದಲ್ಲಿ ರಂಗ ತಿಲಕ ಸಾಂಸ್ಕೃತಿಕ ಕಲಾ ಟ್ರಸ್ಟ್ ನ ಉದ್ಘಾಟನಾ ಕಾರ್ಯಕ್ರಮ ಹಾಗೂ ಲೋಗೋ ಉದ್ಘಾಟನೆಯನ್ನು. ಬಿಟಿ ಜಯಚಂದ್ರ ಜನಪ್ರಿಯ ಶಾಸಕರು ಹಾಗೂ ದೆಹಲಿಯ ವಿಶೇಷ ಪ್ರತಿನಿಧಿ ಶಿರಾ. ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ವೇದ ಸಿನಿಮಾದ ಜುಂಜಪ್ಪ ಹಾಡಿನ ಜಾನಪದ ಗಾಯಕರಾದ ಮೋಹನ್ ಕುಮಾರ್ ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ಚಿತ್ರದುರ್ಗ, ರಾಜ್ಯಾಧ್ಯಕ್ಷರಾದ ರಾಜು ಎಸ್. ಸುಲೇನಹಳ್ಳಿ, ಈ ಕಾರ್ಯಕ್ರಮದ ಸಮ್ಮೇಳನ ಅಧ್ಯಕ್ಷರಾದ ಬಸಮ್ಮ ಹಿರೇಮಠ ರಾಯಚೂರು ಸಾಹಿತಿಗಳು ಮತ್ತು ಪರಿಸರ ಪ್ರೇಮಿ ಸಮಾಜಸೇವಕರು, ರವಿಕುಮಾರ್. ಡಿ ಎಂ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುಮಕೂರು,ಸಂಜಯ್ ಎಸ್ ಗೌಡ, ಶಿಕ್ಷಣ ತಜ್ಞರು ಹಾಗೂ ವರ್ಧಮಾನ ಪಬ್ಲಿಕ್ ಸ್ಕೂಲ್, ಚೇರ್ಮನ್ ಶಿರಾ, ಅಣ್ಣಪ್ಪ ಮೇಟಿ ಗೌಡ ಅಧ್ಯಕ್ಷರು ಬೆಳಕು ಸಾಂಸ್ಕೃತಿಕ ಟ್ರಸ್ಟ್, ಮಲ್ಲಿಕಾರ್ಜುನ ತಾಳ್ಯ ಯುವ ಕವಿಗಳು ಚಿತ್ರದುರ್ಗ ಹಾಗೂ ರಂಗ ತಿಲಕ ಸಾಂಸ್ಕೃತಿಕ ಕಲಾ ಟ್ರಸ್ಟ್ ನ ಅಧ್ಯಕ್ಷರಾದ ಡಿಜಿ ತಿರುಮಲ ಅವರು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕಂಸಾಳೆ ಜಾನಪದ ಕಾರ್ಯಕ್ರಮ ಜರುಗಿದವು, ಕಾರ್ಯಕ್ರಮದ ನಿರೂಪಣೆಯನ್ನು ಉದಯ್ ಬಡಿಗೇರ್ ಮೈದೂರು, ಕುಮಾರಿ ಸಿಂಚನ ಜಿಎಸ್ ಗೊರವನಹಳ್ಳಿ ನಿರೂಪಿಸಿದರು. ಸ್ವಾಗತ ಕಾರ್ಯಕ್ರಮವನ್ನು ಕು. ನೇತ್ರ ನಲ್ಲಿಕಟ್ಟೆ, ಶಿವಮೂರ್ತಿ ಟಿ. ಕೋಡಿಹಳ್ಳಿ ಸಾವಿತ್ರಿ ಕೆಬಿ ಹಿರಿಯ ಸಾಹಿತಿಗಳು. ನಿರ್ವಹಿಸಿದರು ವಂದನಾರ್ಪಣೆಯನ್ನು ಭೀಮೇಶ್ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ರಂಗ ತಿಲಕ ಸಾಂಸ್ಕೃತಿ ಕಲಾ ಟ್ರಸ್ಟ್ ನಾ ಅಧ್ಯಕ್ಷರಾದ ಡಿಜಿ ತಿರುಮಲ ಅವರು ತಿಳಿಸಿದರು.

RELATED ARTICLES
- Advertisment -
Google search engine

Most Popular