ಕಾರ್ಕಳ: ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಮಂತ್ರಿ ಆದ ಖುಷಿಯಲ್ಲಿ ಮೋದಿ ಅಭಿಮಾನಿಗಳಾದ ಪ್ರಕೃತಿ ಬಸ್ಸಿನ ಸಿಬ್ಬಂದಿ ಪ್ರಸಾದ್ ಕುಲಾಲ್, ತಿಲಕ್ ಮತ್ತು ಇನ್ನಿತರ ಅಭಿಮಾನಿಗಳು ಜನರಿಗೆ ಸೋಮವಾರ ಇಡೀ ದಿನ ಬಸ್ನಲ್ಲಿ ಉಚಿತ ಪ್ರಯಾಣದ ಕೊಡುಗೆ ನೀಡಲಿದ್ದಾರೆ . ಈ ಬಸ್ ಕಟೀಲು, ಕಿನ್ನಿಗೊಳಿ, ಕಾವೂರು, ಪದವಿನಂಗಡಿ, ಮಂಗಳೂರು ರೂಟ್ನಲ್ಲಿ ಸಂಚರಿಸುತ್ತದೆ. ಸೋಮವಾರ ಪ್ರಕೃತಿ ಟ್ರಾವೆಲ್ಸ್ ಬಸ್ನಲ್ಲಿ ಜನರು ಉಚಿತವಾಗಿ ಪ್ರಯಾಣಿಸಬಹುದು.