Friday, May 16, 2025
Homeದಾವಣಗೆರೆವಿಜೃಂಭಣೆಯಿಂದ ನಡೆದ ಜಿ.ಎಸ್. ಸಮಾಜದ 49ನೇ ಶ್ರೀ ಗಣೇಶೋತ್ಸವ

ವಿಜೃಂಭಣೆಯಿಂದ ನಡೆದ ಜಿ.ಎಸ್. ಸಮಾಜದ 49ನೇ ಶ್ರೀ ಗಣೇಶೋತ್ಸವ

ದಾವಣಗೆರೆ-ಸೆಪ್ಟೆಂಬರ್,
ದಾವಣಗೆರೆಯ ಗೌಡ ಸಾರಸ್ವತ ಸಮಾಜದ 49ನೇ ವರ್ಷದ ಶ್ರೀ ಗಣೇಶೋತ್ಸವ ವಿಜೃಂಭಣೆಯಿಂದ ಐದು ದಿನಗಳ ಕಾಲ ಶ್ರೀರಾಮ ಜಪದೊಂದಿಗೆ ಯಶಸ್ವಿಯಾಗಿ ನಡೆಯಿತು ಎಂದು ನಿಕಟಪೂರ್ವ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಶ್ರೀ ಗಣಹೋಮ, ಮೂಡಗಣಪತಿ, ರಂಗಪೂಜೆ ಮಧ್ಯಾಹ್ನ ಮತ್ತು ರಾತ್ರಿ ನಿತ್ಯ ಪೂಜೆ, ಹೂವಿನ ಅಲಂಕಾರ
ಪೂಜೆ, ಅನ್ನಸಂತರ್ಪಣೆ ಸಮಾಜದ ಮಹಿಳಾ ವಿಭಾಗದಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು, ಮಕ್ಕಳಿಗೆ,
ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳು, ವಿಜೇತರಿಗೆ ನಗದು ಬಹುಮಾನ, ಸಾಮೂಹಿಕ ಭಜನೆಯೊಂದಿಗೆ ನಡೆದ ಈ ಆಧ್ಯಾತ್ಮ ಪರಂಪರೆಯ ಶಾಸ್ತ್ರೋಕ್ತವಾಗಿ ಧಾರ್ಮಿಕ ಸಮಾರಂಭದಲ್ಲಿ ಸಮಾಜ ಬಾಂಧವರೂ ಸೇರಿದಂತೆ, ಸಮಾಜದ ಅಧ್ಯಕ್ಷರಾದ ಅಮಿತಾ ಡಾ. ವೇಣುಗೋಪಾಲ್ ಪೈ, ಉಪಾಧ್ಯಕ್ಷರಾದ ನಿತ್ಯಾನಂದ ಕಾಮತ್, ಪ್ರಧಾನ ಕಾರ್ಯದರ್ಶಿ ಕೆ.ವೆಂಕಟರಮಣಭಟ್, ಖಜಾಂಚಿ ಆರ್.ವಿ.ಶೆಣೈ, ಸಹ ಕಾರ್ಯದರ್ಶಿ ಕಿರಣ್‌ಕುಮಾರ್ ಶೆಣೈ, ಸಮಿತಿ ಸದಸ್ಯರಾದ ರಾಘವೇಂದ್ರ ಕಾಮತ್, ಕೀರ್ತಿಕಿಣಿ, ಗಣೇಶ ಜಿ.ತಿಳ್ವೆ, ರೇಖಾ ಡಿ.ಪ್ರಭು, ಉಷಾ ವಾಲವಾಲ್ಕರ್ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿಗೆ ನಡೆದ ಸಮಾಜದ ಸರ್ವ ಸದಸ್ಯರ ಮಹಾಸಭೆಯಲ್ಲಿ ಮುಂದಿನ ವರ್ಷ 50ನೇ ವರ್ಷದ ಸುವರ್ಣ
ಶ್ರೀ ಗಣೇಶೋತ್ಸವ ನಡೆಸುವ ಕುರಿತು ತೀರ್ಮಾನಿಸಲಾಯಿತು.

RELATED ARTICLES
- Advertisment -
Google search engine

Most Popular