Monday, May 12, 2025
HomeUncategorizedಪ್ರಗತಿಪರ ಸೇವಾ ಸಂಸ್ಥೆ (ರಿ.) , ಮಂಡ್ಯ. ವತಿಯಿಂದ 20ನೇ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

ಪ್ರಗತಿಪರ ಸೇವಾ ಸಂಸ್ಥೆ (ರಿ.) , ಮಂಡ್ಯ. ವತಿಯಿಂದ 20ನೇ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

2024-25 ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಕುಡೂರು ಶಾಲಾ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆಗೆ ಶಾಲಾ, ಎಸ್.ಡಿ.ಎಂ.ಸಿ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶ್ಲಾಘನೆ ಹಾಗೂ ಗೌರವಾರ್ಪಣೆ.

ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಶಾಲೆಯಿಂದ ಭಾಗವಹಿಸಿದ 20 ವಿದ್ಯಾರ್ಥಿಗಳ ಪೈಕಿ 7 ನೇ ತರಗತಿಯ ಧನುಷ್ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ಕಲಾ ವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದು ,4 ನೇ ತರಗತಿಯ ಆಯುಷ್ ಕೆ.ಎಸ್ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ಕಲಾ ವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದು ಪ್ರಮಾಣ ಪತ್ರ, ಮೆಡಲ್ ಹಾಗೂ ಕ್ರಾಫ್ಟ್ ಕಿಟ್ ಪಡೆದಿದ್ದು ಶಾಲಾ ಹಾಗೂ SDMC ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಭಾಗವಹಿಸಿದ ಉಳಿದ ಎಲ್ಲಾ 18 ವಿದ್ಯಾರ್ಥಿಗಳು ಕಲಾ ಭೂಷಣ ಪ್ರಶಸ್ತಿ ಪಡೆದು ಪ್ರಮಾಣ ಪತ್ರ ಹಾಗೂ ಕ್ರಾಫ್ಟ್ ಕಿಟ್ ಪಡೆದಿರಿತ್ತಾರೆ. ಆ ಮುಖೇನ ಶಾಲೆಯ ಹಾಗೂ ಊರಿನ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ. ಜೊತೆಗೆ ವಿದ್ಯಾರ್ಥಿಗಳನ್ನು ಚಿತ್ರಕಲಾ ಸ್ಪರ್ಧೆಗೆ ಸಂಘಟಿಸಲು ಶಾಲಾ ಮುಖೋಪಾಧ್ಯಾಯರಾದ ಶ್ರೀ ಹರೀಶ್.ಪೂಜಾರಿ.ಎಸ್ ರವರಿಗೆ ಕಲಾ ಪೋಷಕ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ಸ್ಮರಣಿಕೆ, ಸಂಘಟನಾ ಶಿಕ್ಷಕಿಯಾದ ಶ್ರೀಮತಿ ಶಾಲಿನಿ ಸುಕುಮಾರ್ ಆಚಾರ್ಯರವರಿಗೆ ಸಹ-ಸಂಘಟನಾ ಶಿಕ್ಷಕ ಪ್ರಶಸ್ತಿ ಪ್ರಮಾಣಪತ್ರ ಹಾಗೂ ಸ್ಮರಣಿಕೆ ಪಡೆದಿದ್ದು, ಶಾಲೆಗೆ “ಉತ್ತಮ ಕಲಾ ಶಾಲೆ” ಪ್ರಶಸ್ತಿ ಲಭಿಸಿದ್ದು ಶಾಲಾ SDMC ಅಧ್ಯಕ್ಷರಾದ ಶ್ರೀ ರವಿ ಶೆಟ್ಟಿರವರು ನೀಡಿ ಗೌರವಿಸುತ್ತಾ ಮುಂದೆಯೂ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಇನ್ನಷ್ಟು ಸಾಧನೆ ಮಾಡುವಂತೆ ಮಾರ್ಗದರ್ಶನ ಸದಾ ಮುಂದುವರೆಯಲಿಯೆಂದು ಶುಭ ಹಾರೈಸಿರುತ್ತಾರೆ. ಈ ಸಂದರ್ಭದಲ್ಲಿ ಶಾಲಾ ಅತಿಥಿ ಶಿಕ್ಷಕವೃಂದದವರಾದ ಶೋಭಾ,ಸುರೇಖ, ಗೌರವ ಶಿಕ್ಷಕರಾದ ಸುದರ್ಶನ್,ಭಾವನಾ,ಸುಜಾತ ರವರು , SDMC ಸದಸ್ಯೆ ಸವಿತಾ ಶೆಟ್ಟಿ ಹಾಗೂ ಅಡುಗೆ ಸಿಬ್ಬಂದಿಗಳಾದ ಪುಷ್ಪ ಮತ್ತು ಸವಿತಾ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular