ಸಂಪಿಗೆ ಅನುದಾನಿತ ಹಿರಿಯ. ಪ್ರಾಥಮಿಕ ಶಾಲೆ ಸಂಪಿಗೆ ಇಲ್ಲಿನ ವಿದ್ಯಾರ್ಥಿಗಳಿಗೆ ಶಾಲಾ ಹಳೆ ವಿದ್ಯಾರ್ಥಿಯಾದ ವಸಂತ ಭಟ್ ಪಯ್ಯಾಡಿ ಇವರು ಉಚಿತ ಕೊಡೆಯನ್ನು ವಿತರಿಸಿದರು. ಈ ಸಭೆಯಲ್ಲಿ ವಸಂತ ರಾವ್ ಸಂಪಿಗೆ, ರವಿ ಭಟ್ ಪಯ್ಯಾಡಿ, ರಾಮ ಮೂರ್ತಿ ಹಳೆನೀರು, ವೆಂಕಟೇಶ ಭಟ್ ಮಂಜನಬೈಲ್, ಪೋಷಕರಾದ ಶ್ರೀನಿವಾಸ ಭಟ್ ಉಪಸ್ಥಿತರಿದ್ದರು.
ಶಾಲಾ ದಾನಿಗಳಾದ ವಸಂತ ಭಟ್ ಪಯ್ಯಾಡಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಉತ್ತಮವಾಗಿ ಕಲಿತು ತಾವೂ ಕೂಡ ಇದೇ ರೀತಿಯಲ್ಲಿ ಮುಂದೆ ತಮ್ಮಿಂದಾದ ಸಹಾಯವನ್ನು ಮಾಡುವಂತೆ ಹೇಳಿ ಶುಭ ಹಾರೈಸಿದರು.
ಸಹಶಿಕ್ಷಕಿಯಾದ ಶ್ರೀಮತಿಯವರು ಸ್ವಾಗತಿಸಿದರು.
ಶಾಲಾ ವಿದ್ಯಾರ್ಥಿಯಾದ ಪ್ರಣಾಮ್ ಧನ್ಯವಾದವನ್ನು ಸಮರ್ಪಿಸಿದನು.