Sunday, January 19, 2025
Homeಉಡುಪಿಡಿ.13 : ಪೇಜಾವರ ಮಠದ ಆಡಳಿತ ಒಳಪಟ್ಟ  ಗುಂಡಿಬೈಲು ಅನುದಾನಿತ ಕನ್ನಡ ಹಾಗೂ ಆಂಗ್ಲ ಮಾಧ್ಯಮ...

ಡಿ.13 : ಪೇಜಾವರ ಮಠದ ಆಡಳಿತ ಒಳಪಟ್ಟ  ಗುಂಡಿಬೈಲು ಅನುದಾನಿತ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲಾ ವಾಷಿಕೋತ್ಸವ

ಉಡುಪಿ ; ಪೇಜಾವರ ಮಠದ ಆಡಳಿತ ಒಳಪಟ್ಟ  ಗುಂಡಿಬೈಲು ಅನುದಾನಿತ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲಾ ವಾಷಿಕೋತ್ಸವ ಡಿ . 13  ಶುಕ್ರವಾರ ದೊಡ್ಡಣಗುಡ್ಡೆಯ ಜನತಾ ವ್ಯಾಯಾಮ ಶಾಲೆಯಲ್ಲಿ ಜರಗಿತು. 

ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ದೀಪ ಬೆಳಗಿಸಿ  ಚಾಲನೆ  ನೀಡಿ , ವಿದ್ಯಾರ್ಥಿಗಳು ಜೀವನದಲ್ಲಿ  ಶಿಸ್ತು  , ಶ್ರದ್ದೆ ಯಿಂದ ಏಕಾಗ್ರತೆ ಯಿಂದ ವಿದ್ಯೆ ಕಲಿತು ಮುಂದೆ ದೇಶದ ಉತ್ತಮ ಪ್ರಜೆಗಳಾಗಿ ಬೆಳೆದು  ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು.                                          ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಡಾ  ಎಮ್  ಆರ್  ಹೆಗಡೆ  , ನಗರಸಭೆಯ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ  , ಡಾ  ಸುದರ್ಶನ್ ಭಾರತೀಯ  , ನಗರ ಸಭಾ ಸದಸ್ಯೆ ಗೀತಾ ಶೇಟ್ ಹಾಗೂ ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು  , ಉಭಯ ಶಾಲಾ ಮುಖ್ಯಸ್ಥರು , ಪೋಷಕರು , ವಿದ್ಯಾರ್ಥಿಗಳು ಉಪಸ್ಥರಿದ್ದರು.       ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು  , ಶಾಲಾ ವಿದ್ಯಾರ್ಥಿಗಳಿಂದ  ಮನೋರಂಜನೆ ಕಾರ್ಯಕ್ರಮ ನಡೆಯಿತು.        

RELATED ARTICLES
- Advertisment -
Google search engine

Most Popular