Monday, January 20, 2025
Homeಮಂಗಳೂರುಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಸಹಾಯಧನ ಹಸ್ತಾಂತರ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಸಹಾಯಧನ ಹಸ್ತಾಂತರ

ಯಕ್ಷಗಾನ ಪ್ರಪಂಚ ಕಂಡ ಅಪ್ರತಿಮ ವಿದ್ವಾಂಸ ಶ್ರೀ ಗಣೇಶ್ ಕೊಲೆಕಾಡಿ ಅವರ ಆರೋಗ್ಯದ ತುರ್ತು ಪರಿಸ್ಥಿತಿಯನ್ನು ಮನಗಂಡು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರಿನ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು ದಿನಾಂಕ 3-12-2024 ಮಂಗಳವಾರ ಸಂಜೆ ಶ್ರೀಯುತರ ಮನೆಗೆ ಭೇಟಿ ನೀಡಿದರು.
ಶ್ರೀಯುತರಿಗೆ ಫೌಂಡೇಶನ್ ವತಿಯಿಂದ ರೂಪಾಯಿ 50,000 ನೀಡಲಾಯಿತು.
ಈ ಮೊದಲು ಕೂಡ ನಮ್ಮ ಫೌಂಡೇಶನ್ ಸುಮಾರು 2 ಲಕ್ಷಕ್ಕಿಂತಲೂ ಹೆಚ್ಚು ಶ್ರೀಯುತ ರಿಗೆ ಸಹಕಾರ ನೀಡಿದೆ.ಅಷ್ಟೇ ಅಲ್ಲದೆ ಕಳೆದ 6 ವರ್ಷಗಳಿಂದ ಪ್ರತಿ ತಿಂಗಳು 1000 ಚಿಕಿತ್ಸಾ ವೆಚ್ಚಕ್ಕಾಗಿ ನಮ್ಮ ಯಕ್ಷಧ್ರುವ ಫೌಂಡೇಶನ್ ನೀಡುತ್ತಿದೆ.
ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮ್ ಭಂಡಾರಿ, ಕೋಶಾಧಿಕಾರಿ ಶ್ರೀ ಸಿ ಎ ಸುದೇಶ್ ಕುಮಾರ್ ರೈ , ಶ್ರೀ ಕದ್ರಿ ನವನೀತ್ ಶೆಟ್ಟಿ, ಶ್ರೀ ಪ್ರದೀಪ್ ಆಳ್ವ ಕದ್ರಿ, ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀ ವಿಜಯ್ ಕುಮಾರ್ ಮೊಯ್ಲೊಟ್ಟು ಉಪಸ್ಥಿತರಿದ್ದರು.
ಈ ಕಲಾವಿದರು ಕಳೆದ 18 ವರ್ಷಗಳಿಂದ ತೀರಾ ಅನಾರೋಗ್ಯ ದಿಂದ ಇದ್ದಾರೆ. ತಾಯಿ ಕೂಡ ತುಂಬಾ ಪ್ರಾಯದವರಗಿದ್ದು, ಮನೆಯಲ್ಲಿ ಊಟಕ್ಕೂ ಮದ್ದಿಗೂ ಪರದಾಡುವ ಸ್ಥಿತಿ,ಬೇರೆ ಯಾರೂ ಕುಟುಂಬಸ್ಥರು ಇವರಿಗೆ ಇಲ್ಲ.ಇವರು ಕಲಾ ವಲಯಕ್ಕೆ ನೀಡಿದ ಕೊಡುಗೆ ಅಪಾರ.ಇಂತಹ ವಿದ್ವಾಂಸರ ಸ್ಥಿತಿ, ಅವರ ತಾಯಿಯ ಸ್ಥಿತಿ ಚಿಂತಾಜನಕ.
ತೀರಾ ಸಂಕಷ್ಟದಲ್ಲಿರುವ ಗಣೇಶ್ ಪೂಜಾರಿ ಕೊಲೆಕಾಡಿ ಕಲಾವಿದನ ಕಷ್ಟಕ್ಕೆ ನಾವೆಲ್ಲರೂ ಕೈಜೋಡಿಸೋಣ.
ಅವರ ಫೋನ್ ಪೇ ಅಥವಾ ಗೂಗಲ್ ಪೇ ನಂಬರ್
9482130381

RELATED ARTICLES
- Advertisment -
Google search engine

Most Popular