Monday, February 10, 2025
Homeಮೂಡುಬಿದಿರೆಮೂಡುಬಿದಿರೆ ಕಂದಾಯ ದಾಖಲೆ ಗಣಕೀಕರಣಗೊಳಿಸುವ ಕಾರ್ಯಕ್ರಮದ ವ್ಯವಸ್ಥೆಯ ಪ್ರಕ್ರಿಯೆ ಉದ್ಘಾಟನೆ

ಮೂಡುಬಿದಿರೆ ಕಂದಾಯ ದಾಖಲೆ ಗಣಕೀಕರಣಗೊಳಿಸುವ ಕಾರ್ಯಕ್ರಮದ ವ್ಯವಸ್ಥೆಯ ಪ್ರಕ್ರಿಯೆ ಉದ್ಘಾಟನೆ

ಮೂಡುಬಿದಿರೆ: ಮೂಡುಬಿದರೆ ತಾಲೂಕಿನ ಪ್ರತಿಯೊಬ್ಬರ ಭೂ ಸಂಬಂಧ ದಾಖಲೆಗಳು ನಾಶವಾಗಬಾರದು, ಸ್ಥಳಾವಕಾಶದ ಕೊರತೆಯಿಂದ ಹಾಳಾಗಬಾರದು ಎನ್ನುವ ದೃಷ್ಟಿಯಿಂದ ರಾಜ್ಯ ಸರಕಾರದ ಯೋಜನೆಯಂತೆ ಡಿಜಿಟಲೀಕರಣ ಮಾಡಲು ನಿರ್ಧರಿಸಲಾಗಿದೆ. ಆ ಪ್ರಕಾರದಲ್ಲಿ ಪ್ರತಿಯೊಬ್ಬರ ఆರ್టి సి, ಮ್ಯುಟೇಶನ್ ಇತ್ಯಾದಿ ಎಲ್ಲಾ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ಸಂಗ್ರಹಿಸಿ ಇಡುವ ವ್ಯವಸ್ಥೆಯನ್ನು ಎರಡು ಮೂರು ತಿಂಗಳಲ್ಲಿ ಸಂಪೂರ್ಣ ಗೊಳಿಸಲಾಗುವುದು ಎಂದು ಮುಲ್ಕಿ -ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ತಿಳಿಸಿದರು.
ಜನವರಿ 15 ರಂದು ಮೂಡುಬಿದಿರೆ ತಾಲೂಕು ಕಚೇರಿಯ ಭೂ ಸುರಕ್ಷಾ ಯೋಜನೆ ಅಡಿ ಅಭಿಲೇಖಾಲಯದ ಕಂದಾಯ ದಾಖಲೆ ಗಣಕೀಕರಣಗೊಳಿಸುವ ಕಾರ್ಯಕ್ರಮದ ವ್ಯವಸ್ಥೆಯ ಪ್ರಕ್ರಿಯೆಯ ಉದ್ಘಾಟನೆಯನ್ನು ದೀಪ ಬೆಳಗಿ ನಡೆಸಿಕೊಟ್ಟರು.

ತರುವಾಯ ಗಣಕೀಕರಣದ ಪ್ರಕ್ರಿಯೆಯನ್ನು ವೀಕ್ಷಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಕುಸುಮಾಧ‌ರ್, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಪುರಸಭಾ ಮುಖ್ಯಾಧಿಕಾರಿ ಇಂದು, ಪುರಸಭಾ ಸದಸ್ಯ ಕೊರಗಪ್ಪ ಹಾಗೂ ಇತರರು ಹಾಜರಿದ್ದರು.

ತಾಲೂಕು ತಹಶೀಲ್ದಾರ್ ಪ್ರದೀಪ್ ಹುರ್ಡೇಕ‌ರ್ ಸ್ವಾಗತಿಸಿ, ವಂದಿಸಿದರು.

ಗಣಕೀಕರಣದ ಉಸ್ತುವಾರಿಗಳಾದ ನೀಲೇಶ್‌, ಅಕ್ಷಯ್, ಸನತ್ ಕುಮಾರ್, ತುಳಸಿ, ಜಸ್ವಿತಾ, ಹರ್ಷಿತ ಅವರುಗಳು ಗಣಕೀಕರಣವನ್ನು ಆದಷ್ಟು ಶೀಘ್ರ ಮಾಡಿ ಕೊಡಲು ಒಪ್ಪಿಕೊಂಡರು.

RELATED ARTICLES
- Advertisment -
Google search engine

Most Popular