ಕ್ಯಾಥೋಲಿಕ್ ಧರ್ಮದ ಪರಮೋಚ್ಚ ಧರ್ಮ ಗುರು ಪೋಪ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹೌಸ್ಗೆ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡʼಸೋಜಾ ತೆರಳಿ ಭಾವಚಿತ್ರಕ್ಕೆ ಪುಷ್ಪ ನಮನ.
ಕ್ಯಾಥೋಲಿಕ್ ಧರ್ಮದ ಪರಮೋಚ್ಚ ಧರ್ಮ ಗುರು ಪೋಪ್ ಪ್ರಾನ್ಸಿಸ್ ಇವರ ಮರಣದ ವಾರ್ತೆ ತಿಳಿಯುತ್ತಿದ್ದಂತೆ ಮಂಗಳೂರು ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಲ್ಲಿ ಪ್ರಾರ್ಥನೆಯನ್ನು ನಡೆಸುವುದರ ಜೊತೆಗೆ ಪೋಪ್ರವರಿಗೆ ಗೌರವ ಸಲ್ಲಿಸಲು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹೌಸ್ ಗೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾವರು ತೆರಳಿ ಅವರ ಭಾವಚಿತ್ರಕ್ಕೆ ಪುಷ್ಟವನ್ನು ಅರ್ಪಿಸುವುದರ ಮೂಲಕ ಅಂತಿಮ ನಮನವನ್ನುಸಲ್ಲಿಸಿದರು. ಎರಡು ವರ್ಷಗಳ ಕಾಲ ರೋಮನ್ ಕ್ಯಾಥೊಲಿಕ್ ಪ್ರಾಂತ್ಯದ ಪರಮೋಚ್ಚ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಪ್ರಪಂಚದೆಡೆ ಶಾಂತಿಯ ಸಂದೇಶವನ್ನು ಸಾರಿದ ಪೋಪ್ ಪ್ರಾನ್ಸಿಸ್ ಇವರು ಜಗತ್ತಿನ ರೋಮನ್ ಕ್ಯಾಥೋಲಿಕ್ ಸಮುದಾಯದ ಏಕತೆಗಾಗಿ ಮತ್ತು ಪ್ರೀತಿ ವಿಶ್ವಾಸದ ಮೂಲಕ ಪ್ರಪಂಚವನ್ನು ಗೆಲ್ಲಬಹುದು ಎಂಬ ಸಂದೇಶವನ್ನು ಸಾರಿದವರು ಐವನ್ ಡಿಸೋಜಾರವರು ಇಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ| ಡಾ| ಪೀಠರ್ ಪೌಲ್ ಸಲ್ದಾನರವರ ಮೂಲಕ ಸಂತಾಪ ವ್ಯಕ್ತಪಡಿಸಿ ಧರ್ಮಾಧ್ಯಕ್ಷರ ನಿವಾಸದಲ್ಲಿ ಇಡಲಾದ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸುವ ಮೂಲಕ ಅಂತಿಮ ನಮನವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ರೆ| ಡಾ| ಪೀಠರ್ ಪೌಲ್ ಸಲ್ದಾನ ಕ್ಯಾಥೊಲಿಕ್ ಸಭಾದ ಅಲ್ವಿನ್ ಡಿʼಸೋಜಾ, ಕ್ರಾಂಗ್ರೆಸ್ ನಾಯಕರುಗಳಾದ ಮನುರಾಜ್ ವಿಕಾಸ್ ಶೆಟ್ಟಿ, ಸಿರಾಜ್ ಬಜ್ಪೆ, ಯೋಗೇಶ್ ನಾಯಕ್, ನಿಸಾರ್ ಬಜಪೆ ಜೊತೆಗಿದ್ದರು.