ಕೋಟ: ಇತಿಹಾಸ ಪ್ರಸಿದ್ಧವಾದ ಸಾಯಿಬ್ರಕಟ್ಟೆ ಸಮೀಪ ಜಂಬೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನೂತನವಾಗಿ ಶಿಲಾಮಯಗೊಂಡಿದ್ದು ಇದರ ಪುನಃ ಪ್ರತಿಷ್ಠಾ ಮಹೋತ್ಸವ ಮತ್ತು ಅನ್ನಸಂತರ್ಪಣೆ ಎ.22 ರಂದು ಜರಗಲಿದೆ.
ಈ ಪ್ರಯುಕ್ತ ಬೆಳಗ್ಗೆ 7 ಗಂಟೆಗೆ ವಿವಿಧ ಹೋಮ, 9.40ಕ್ಕೆ ಶ್ರೀಮಹಾಲಿಂಗೇಶ್ವರದೇವರ ಅಷ್ಟಬಂಧ ಪುನಃ ಪ್ರತಿಷ್ಠಾ ಮಹೋತ್ಸವ, ಜೀವ ಕುಂಭಾಭಿಷೇಕ, ಶಿಖರ ಪ್ರತಿಷ್ಠಾ ಮಹೋತ್ಸವ, ಮಹಾಪ್ರಾಣ ಪ್ರತಿಷ್ಠಾಪನೆ, ನ್ಯಾಸಾದಿಗಳು, ತತ್ವಹೋಮ, ಬ್ರಹ್ಮಕುಂಭಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಬೆಳಗ್ಗೆ 11.30ರಿಂದ ಚಿತ್ರಾಪುರ ಮಠದ ದ ಶ್ರೀ ವಿದ್ಯೆಂದ್ರ ತೀರ್ಥರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, 12.30ಕ್ಕೆ ಮಹಾ ಕುಂಭಾಭಿಷೇಕ, ಅನಂತರ ಅನ್ನಸಂತರ್ಪಣೆ, ಅಪರಾಹ್ನ 3ಕ್ಕೆ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6.00ರಿಂದ ಸುಪ್ರಸಿದ್ದ ಕಲಾವಿದರಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ಪ್ರಯುಕ್ತ ಎ.20 ರಂದು ಸಾರ್ವಜನಿಕರಿಂದ ಹೊರೆಕಾಣಿಕೆ ಸಮರ್ಪಣೆ ಪುರಮೆರವಣಿಗೆಯೊಂದಿಗೆ ನಡೆಯಲಿದೆ ಎಂದು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಪರಮೇಶ್ವರ ಜಿ. ಅಡಿಗ ಹಾಗೂ ದೇಗುಲದ ಮುಖ್ಯಸ್ಥರು ತಿಳಿಸಿದ್ದಾರೆ.